ಮಣಿಪಾಲ ಪ್ರಗತಿನಗರದಲ್ಲಿ ಕನಕದಾಸರ ಜಯಂತಿ

Update: 2020-12-09 12:33 GMT

ಮಣಿಪಾಲ, ಡಿ.9: ಇಲ್ಲಿನ ಪ್ರಗತಿ ನಗರದ ಕನಕದಾಸ ಯುವಕ ಸಂಘದ ವತಿಯಿಂದ ‘ಕನಕದಾಸರ ಜಯಂತಿ’ಯನ್ನು ಆಚರಿಸಲಾಯಿತು.

ಗಣಪತಿ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಮನಪ್ಪ ಬಾಚನಗುಡ್ಡ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಮೇಟಿ ಮುದಿಯಪ್ಪ, ನಿಕಟಪೂರ್ವ ಅಧ್ಯಕ್ಷ ಡೊಳ್ಳಿನ ಹನುಮಂತ, ನಿರ್ದೇಶಕ ಬಸವರಾಜ ಕುರುಬರ, ಖಜಾಂಚಿ ಮಲ್ಲಪ್ಪ ಮೇಟಿ ಇವರುಗಳನ್ನು ಸನ್ಮಾನಿಸಲಾಯಿತು.

ಮೇಟಿ ಮುದಿಯಪ್ಪ ಕನಕದಾಸರ ಕುರಿತು ಉಪನ್ಯಾಸ ನೀಡಿ ಅವರ ಅದರ್ಶ ಗುಣಗಳನ್ನು ಪಾಲಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಮಣ್ಣ ಎಮ್ಮಿ, ಗುಂಡಪ್ಪ, ನಾಗರಾಜ, ಸಯ್ಯದ್, ಎಲ್ಲಪ್ಪ ಆಸಂಗಿ, ಆಸಂಗಪ್ಪಕುಚೇಲ ಉಪಸ್ಥಿತರಿದ್ದರು.

ಅಧ್ಯಕ್ಷ ಯಮನಪ್ಪ ಸ್ವಾಗತಿಸಿದರೆ, ವೀರೇಶ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಇದಕ್ಕೆ ಮೊದಲು ಪ್ರಗತಿನಗರದ ನಾಗಬನದಿಂದ ಗಣಪತಿ ದೇವಸ್ಥಾನ ದವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ, ಡೊಳ್ಳಿನ ಹನುಮಂತ, ಅಲೆವೂರು ಗ್ರಾಪಂನ ಮಾಜಿ ಅಧ್ಯಕ್ಷ ಹರೀಶ್ ಕಿಣಿ, ಶ್ರೀಕಾಂತ ನಾಯಕ್, ಮಾಜಿ ಸದಸ್ಯ ಪುಷ್ಪ, ಸುಂದರ ನಾಯಕ್ ಮುಂತಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News