ಡಿ.14ರಂದು ಮೀನುಗಾರರಿಂದ ಪ್ರತಿಭಟನೆ
Update: 2020-12-13 15:13 GMT
ಬೈಂದೂರು, ಡಿ.13: ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಬೈಂದೂರು ವಲಯ, ಉಪ್ಪುಂದ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಡಿ.14ರಂದು ಬೆಳಗ್ಗೆ 11ಗಂಟೆಗೆ ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಕೇಂದ್ರ, ರಾಜ್ಯ ಸರಕಾರಕ್ಕೆ ಸಾಮೂಹಿಕ ಮನವಿ ಅರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಅಧ್ಯಕ್ಷ ರಾಮ ಖಾರ್ವಿ, ಕಾರ್ಯದರ್ಶಿ ವಿಠಲ್ ಖಾರ್ವಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.