ಪುತ್ತೂರು: ಕೆಎಸ್ಸಾರ್ಟಿಸಿ ಬಸ್ಸುಗಳ ಓಡಾಟ ಆರಂಭ

Update: 2020-12-14 14:30 GMT

ಪುತ್ತೂರು: ಕೆಸ್ಸಾರ್ಟಿಸಿ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ 2 ದಿನಗಳಿಂದ ನಡೆಸಲಾಗುತ್ತಿದ್ದ ಮುಷ್ಕರ ಸಡಿಲಗೊಂಡಿದ್ದು, ಸೋಮವಾರ ಮಧ್ಯಾಹ್ನದ ಬಳಿಕ ಪುತ್ತೂರು ಬಸ್ಸು ನಿಲ್ದಾಣದಿಂದ ಕೆಲವೊಂದು ಬಸ್ಸುಗಳು ‌ಓಡಾಟ ನಡೆಸಿದೆ. ಪುತ್ತೂರು- ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಿಗೆ ಬಸ್ಸುಗಳು ಓಡಾಟ ನಡೆಸಿದೆ.

ಸಂಜೆಯ ವೇಳೆಗೆ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಬಸ್ಸುಗಳು ಓಡಾಟ ನಡೆಸಿದೆ.

ಕಳೆದ 2 ದಿನಗಳಲ್ಲಿ ಪ್ರಯಾಣ ಕ್ಕೆ ಟೆಂಪೋಗಳನ್ನು ಆಶ್ರಯಿಸಿಕೊಂಡಿದ್ದ ಪ್ರಯಾಣಿಕರು ಬಸ್ಸುಗಳ ಓಡಾಟ ಆರಂಭಗೊಂಡ ತಕ್ಷಣವೇ ಬಸ್ಸು ನಿಲ್ದಾಣಕ್ಕೆ ತೆರಳಿ ಬಸ್ಸಿನಲ್ಲಿ ಪ್ರಯಾಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News