ಸೂರ್ಯ ಜಮಾಅತ್ ಖಾಝಿಯಾಗಿ ಮಾಣಿ ಉಸ್ತಾದ್ ಅಧಿಕಾರ ಸ್ವೀಕಾರ

Update: 2020-12-19 14:43 GMT

ಬಂಟ್ವಾಳ: ತಾಲೂಕಿ‌ನ ಮಿತ್ತೂರು ಸಮೀಪದ ಸೂರ್ಯ ಜಮಾಅತಿನ ಖಾಝಿಯಾಗಿ ಕರ್ನಾಟಕ ಸುನ್ನಿ‌ ಉಲಮಾ ಒಕ್ಕೂಟದ ರಾಜ್ಯ ಪ್ರ.ಕಾರ್ಯದರ್ಶಿ ಝೈನುಲ್ ಉಲಮಾ ಎಂ.ಎಬ್ದುಲ್ ಹಮೀದ್ ಮುಸ್ಲಿಯಾರ್ ಅಧಿಕಾರ ಸ್ವೀಕರಿಸಿದರು.

ಕನ್ಯಾನ ಮುದರ್ರಿಸ್ ಇಬ್ರಾಹೀಂ‌ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಮಿತ್ತೂರು ಕೆಜಿಎನ್ ದ‌ಅ್‌ವಾ ಕಾಲೇಜು ಪ್ರಾಂಶುಪಾಲ ಸಯ್ಯಿದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಸೂರ್ಯ ಜಮಾಅತ್ ಖತೀಬ್ ಹನೀಫ್ ಸಖಾಫಿ, ಅಧ್ಯಕ್ಷ ಉಮರ್ ಅರ್ಕೆಜಲ್, ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್, ಮಾಜಿ‌ ಪೋಲಿಸ್ ಅಬ್ಬಾಸ್ ಮುಂತಾದವರು ಉಪಸ್ಥಿತರಿದ್ದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News