ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು: ದೂರು
ಮಂಗಳೂರು, ಡಿ.22: ಮನೆಯ ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಕಳವಾದ ಘಟನೆ ನಗರದ ಬಿಜೈ ಮ್ಯೂಸಿಯಂ ರಸ್ತೆ ಸಮೀಪ ನಡೆದಿದೆ.
ಶಿವಮೊಗ್ಗದ ಹೊಳೆಬೆನವಳ್ಳಿಯ ವ್ಯಕ್ತಿಯೋರ್ವ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು, ನಗರದ ಬಿಜೈನಲ್ಲಿ ತಾಯಿ ಹಾಗೂ ಮಾವನ ಜತೆ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದರು. ತಾಯಿಯನ್ನು ಕಳೆದ ಆಗಸ್ಟ್ನಲ್ಲಿ ಶಿವಮೊಗ್ಗಕ್ಕೆ ಕಳುಹಿಸಿ ಕೊಟ್ಟಿದ್ದರು. ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಮಾವ ಮಾತ್ರ ಇದ್ದರು.
ದೂರು ನೀಡಿದ ವ್ಯಕ್ತಿಯು ಮುಂದಿನ ವರ್ಷ ಮದುವೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣಗಳನ್ನು ಖರೀದಿಸಿ ಬಾಡಿಗೆ ಮನೆಯ ಕಪಾಟಿ ನಲ್ಲಿ ಇಟ್ಟಿದ್ದರು. ಕಪಾಟಿಗೆ ಬೀಗ ಹಾಕಿ ಕೀಯನ್ನು ಸೇಲಂಗೆ ತಾನು ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗಿದ್ದರು. ಈಗ ಮನೆಗೆ ವಾಪಸ್ ಬಂದು ಕಪಾಟಿನ ಬೀಗ ತೆಗೆದು ನೋಡಿದಾಗ 4.90 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪ್ರಕರಣ ದಾಖಲಾಗಿದೆ.