ಕೆಎಂ ಶರೀಫ್ ನಿಧನ: ಐಎಫ್ಎಫ್ ಸಂತಾಪ
Update: 2020-12-22 17:58 GMT
ಮಂಗಳೂರು : ಪಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ, ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಕೆ.ಎಂ. ಶರೀಫ್ ಅವರ ನಿಧನಕ್ಕೆ ಇಂಡಿಯನ್ ಫ್ರೆಟರ್ನಿಟಿ ಫೋರಮ್ ಸಂತಾಪ ಸೂಚಿಸಿದೆ.
ವರದಕ್ಷಿಣೆ ವಿರುದ್ಧ ಹೋರಾಟ, ಫ್ಯಾಸಿಸಂ ವಿರುದ್ಧದ ಕಠಿಣ ನಿಲುವು, ದಲಿತ, ದಮನಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಅವರ ಅಗಲಿಕೆಯು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಐಎಫ್ಎಫ್ ಬಹರೈನ್, ಕರ್ನಾಟಕ ಘಟಕ ಸಂತಾಪ ಸೂಚಿಸಿದೆ.