ಕುಲಾಲ್ : ಉಚಿತ ಸುನ್ನತ್ ಕಾರ್ಯಕ್ರಮ
ಕುಲಾಲ್ : ತಾಜುಲ್ ಉಲಮಾ ರಿಲೀಫ್ ದ.ಕ. ಇದರ ವತಿಯಿಂದ ಜಿಲ್ಲೆಯಾದ್ಯಂತ ನಡೆಸಲು ಉದ್ದೇಶಿಸಿರುವ ಬಡ/ಯತೀಮ್ ಮಕ್ಕಳ ಉಚಿತ ಸುನ್ನತ್ (ಮುಂಜಿ) ಅಭಿಯಾನದ ಪ್ರಥಮ ಶಿಬಿರ ಬದ್ರೀಯಾ ಮಸ್ಜಿದ್ ಕುಲಾಲ್ ನಲ್ಲಿ ನಡೆಯಿತು.
28 ಯತೀಮ್/ ಬಡಕುಟುಂಬದ ಮಕ್ಕಳು ಭಾಗವಹಿಸಿದ್ದರು. ಬೆಳ್ತಂಗಡಿ ಸಂಯುಕ್ತ ಜಮಾತ್ ಇದರ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್ ಉದ್ಘಾಟನೆ ಮಾಡಿದರು.
ಮಕ್ಸೂದ್ ಸಹದಿ ಸ್ವಾಗತಿಸಿದರು. ಅತಾವುಲ್ಲಾ ಇಮಾಮಿ, ತಸ್ಲೀಮ್ ಸಖಾಫಿ, ಅಬ್ದುಲ್ ಅಝೀಝ್ ಝುಹ್ ರಿ ಕಿಲ್ಲೂರು, ಬ್ಲಡ್ ಸೈಬೊ ಇದರ ಸಂಚಾಲಕ ಇಬಾಹಿಂ ಕರೀಮ್ , ಡಾ. ಇಕೆ ಅಬೂಬಕರ್ ಸಿದ್ದೀಕ್, ಕೆಸಿಎಫ್ ಒಮನ್ ಪ್ರತಿನಿಧಿ ಖಲಂದರ್ ಪರಪ್ಪು, ರಿಲೀಫ್ ಅಧ್ಯಕ್ಷರು ಮುಹಮ್ಮದ್ ಇಕ್ಬಾಲ್ , ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಪುಂಜಾಲಕಟ್ಟೆ ಭಾಗವಹಿಸಿದರು.
ಈ ವೇಳೆ ಸುನ್ನತ್ ನಿರ್ವಹಿಸಿದ ಡಾ. ಇಕೆ ಅಬೂಬಕರ್ ಸಿದ್ದೀಕ್ ಅಡ್ಡೂರು ಹಾಗೂ ಬ್ಲಡ್ ಸೈಬೊ ಸಂಚಾಲಕ ಇಬ್ರಾಹಿಂ ಕರೀಂ ಇವರನ್ನು ರಿಲೀಫ್ ವತಿಯಿಂದ ಸನ್ಮಾನಿಲಾಯಿತು. ಕುಲಾಲ್ ಜಮಾತ್ ವತಿಯಿಂದ ರಿಲೀಫ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ವಗ್ಗ ಅವರನ್ನು ಸನ್ಮಾನಿಸಲಾಯಿತು.