ವಿದ್ಯುತ್ ಆಘಾತ: ತೆಂಗಿನ ಮರದಿಂದ ಬಿದ್ದು ಮೃತ್ಯು

Update: 2020-12-23 15:34 GMT

ಕಾರ್ಕಳ, ಡಿ.23: ತೆಂಗಿನ ಮರ ಕಡಿಯುವ ವೇಳೆ ವಿದ್ಯುತ್ ಸ್ಪರ್ಶದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ  ಕಾರ್ಕಳದ ಕಲ್ಲೊಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ವಾಸು ಎಂದು ಗುರುತಿಸಲಾಗಿದೆ. ಇಫಾಝ್ ಎಂಬವರು ವಾಸು ಅವರನ್ನು ತೆಂಗಿನ ಮರವನ್ನು ಕಡಿಯಲು ನಿಯುಕ್ತಿಗೊಳಿಸಿದ್ದು, ವಾಸು ತೆಂಗಿನ ಮರವನ್ನು ಕಡಿಯುವಾಗ ತೆಂಗಿನ ಸೋಗೆಯ ಸಮೀಪದಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿಯ ಮೇಲೆ ಬಿತ್ತೆನ್ನಲಾಗಿದೆ. ಸೋಗೆಯ ಇನ್ನೊಂದು ಬದಿ ವಾಸು ಕೈಯಲ್ಲಿ ಹಿಡಿದುದರಿಂದ ವಿದ್ಯುತ್ ಆಘಾತಕ್ಕೆ ಒಳಗಾಗಿ ಮರದಿಂದ ಸುಮಾರು 30 ಅಡಿ ಕೆಳಕ್ಕೆ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News