ಬಜ್ಪೆ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನಿಂದ ಸರಳ ವಿವಾಹ

Update: 2020-12-27 15:33 GMT

ಮಂಗಳೂರು, ಡಿ.27: ಬಜ್ಪೆ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಒಂದು ಜೋಡಿ ಸರಳ ವಿವಾಹ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಹಳೆ ವಿಮಾನ ನಿಲ್ದಾಣ ರಸ್ತೆಯ ಮರ್ಹೂಂ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ರವಿವಾರ ನಡೆಯಿತು.

ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ವೌಲಾನ ಬೊಳ್ಳೂರು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ, ಆಸೀಫ್ ಆಪತ್ಭಾಂದವ, ಹನೀಫ್ ಕೆಎಂಸಿಸಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗುರುಪುರ ಬೈಲುಪೇಟೆ ಮಸೀದಿಯ ಖತೀಬ್ ಶರೀಫ್ ದಾರಿಮಿ, ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಹಾಜಿ ಝಕರಿಯಾ, ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹೀಂ, ಹಾಜಿ ಇಸ್ಮಾಯೀಲ್ ಜವಳ, ಬಶೀರ್ ಮದನಿ, ತಬೂಕ್ ದಾರಿಮಿ, ಅಝೀಝ್ ದಾರಿಮಿ, ಯುಪಿ ಇಬ್ರಾಹೀಂ, ಬಿಎಸ್ ಬಶೀರ್ ಜೋಕಟ್ಟೆ, ಬಿಎಚ್ ಸಲೀಂ, ಕೆಪಿ ಮುಹಮ್ಮದ್, ಎಂಎ ಮುಹಮ್ಮದ್, ಹನೀಫ್ ಹಿಲ್‌ಟಾಪ್, ಅಥಾವುಲ್ಲಾ ಜೋಕಟ್ಟೆ, ಇಸ್ಮಾಯೀಲ್ ಇಂಜಿನಿಯರ್, ಹಾಜಿ ಮಯ್ಯದ್ದಿ, ಸಾವುದ್ದೀನ್, ಮನ್ಸೂರ್ ಅಲಿ, ಹಾಜಿ ಉಮರಬ್ಬ, ಮುಹಮ್ಮದ್ ಕಲಂದರ್, ರಿಯಾಝ್ ಹರೇಕಳ, ಇಕ್ಬಾಲ್ ಪ್ಯಾರ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News