ವಿಷದ ಹಾವು ಕಡಿತ: ಓರ್ವ ಮೃತ್ಯು

Update: 2020-12-27 16:42 GMT

ಬೈಂದೂರು, ಡಿ.27: ವಿಷದ ಹಾವು ಕಡಿತಕ್ಕೆ ಒಳಗಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.25ರಂದು ಸಂಜೆ ವೇಳೆ ಶೀರೂರು ಕೇಳಪೇಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಶೀರೂರು ಕೇಳಪೇಟೆ ಗುಮ್ಮನಡಿ ನಿವಾಸಿ ನಾರಾಯಣ ಪೂಜಾರಿ(70) ಎಂದು ಗುರುತಿಸಲಾಗಿದೆ. ಇವರು ಕೃಷಿ ಕೆಲಸದ ಬಗ್ಗೆ ತೋಟದಲ್ಲಿ ನೀರನ್ನು ಬಿಡುತ್ತಿರುವಾಗ ವಿಷದ ಹಾವು ಅವರ ಕಾಲಿಗೆ ಕಚ್ಚಿತ್ತೆನ್ನ ಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News