ಚುಟುಕು ರಚನಾ ಸ್ಪರ್ಧೆಗೆ ಆಹ್ಬಾನ

Update: 2020-12-28 14:25 GMT

ಮಂಗಳೂರು, ಡಿ.28: ಕರಾವಳಿ ಸಾಂಸ್ಕೃತಿಕ ಸೌರಭವು ಚುಟುಕು ರಚನಾ ಸ್ಪರ್ಧೆಯನ್ನು ಜ.26ರಂದು ಬೆಳಗ್ಗೆ 9:30ಕ್ಕೆ ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. 10 ಗಂಟೆಯೊಳಳಗೆ ಚುಟುಕು ರಚನೆಯನ್ನು ಪೂರ್ಣಗೊಳಿಸಬೇಕು. ಸ್ಪರ್ಧೆಗೆ ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.

ಪ್ರತಿಯೊಬ್ಬರೂ 4 ಸಾಲಿನ ಕನಿಷ್ಟ 4 ಚುಟುಕು ಬರೆಯಬೇಕು. ಅವುಗಳಲ್ಲಿ ಉತ್ತಮವಾದ ಒಂದನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. ವಿಜಯಿಗಳಾದವರಿಗೆ ನಗದು 1,100 ರೂ. (ಪ್ರಥಮ), 700 ರೂ. (ದ್ವಿತೀಯ) 300 ರೂ. (ತೃತೀಯ) ಬಹುಮಾನ ನೀಡಲಾಗುವುದು.

ಸೀಮಿತ ಸ್ಪರ್ಧಿಗಳಿಗೆ ಅವಕಾಶವಿರುವುದರಿಂದ ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು. ನೋಂದಣಿಗೆ ಜ.18 ಕೊನೆಯ ದಿನಾಂಕವಾಗಿದೆ. ಸ್ಪರ್ಧೆಯು ಎಲ್ಲರಿಗೂ ಮುಕ್ತವಾಗಿದ್ದು ಕೇವಲ ಒಂದೇ ವಿಭಾಗ ಇರುತ್ತದೆ. ಸ್ಪರ್ಧಿಗಳು 9886510087 ವಾಟ್ಸ್‌ಆ್ಯಪ್‌ಗೆ ಹೆಸರು ಹಾಗೂ ವಿಳಾಸ ಕಳುಹಿಸಿಕೊಡಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News