ಮನೆಯಿಂದ ಚಿನ್ನದ ಸರ ಕಳವು

Update: 2021-01-03 16:53 GMT

ಮಂಗಳೂರು, ಜ.3: ನಗರದ ದೇರೆಬೈಲ್ ಸಮೀಪದ ಕೊಂಚಾಡಿ ಮಹಾಕಾಳಿ ದೇವಸ್ಥಾನ ಬಳಿಯ ನಿವಾಸಿ ಚನ್ನಯ್ಯ ಎಂಬವರ ಮನೆಯಿಂದ ಶುಕ್ರವಾರ 50,000 ರೂ. ಮೌಲ್ಯದ 14 ಗ್ರಾಂ ತೂಕದ ಚಿನ್ನದ ಸರ ಕಳವಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಯ್ಯ ಜ.1ರಂದು ಬೆಳಗ್ಗೆ 9:30ಕ್ಕೆ ತನ್ನ ಮನೆಗೆ ಬೀಗ ಹಾಕಿ ಬಜ್ಪೆ ಕೈಕಂಬದ ಹರ್ಷಿತಾ ಕೆಟರಿಂಗ್‌ಗೆ ಹೋಗಿದ್ದು, ಸಂಜೆ 5:30ಕ್ಕೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲು ಒಳಗಿನಿಂದ ಲಾಕ್ ಹಾಕಿತ್ತು. ಪರಿಶೀಲಿಸಿದಾಗ ಮನೆಯ ಹಿಂದಿನಿಂದ ಅಡುಗೆ ಮನೆಯ ಹೆಂಚನ್ನು ತೆಗೆದು ಮನೆಯೊಳ ಪ್ರವೇಶಿಸಿ ದೇವರ ಸ್ಟ್ಯಾಂಡ್‌ನಲ್ಲಿ ತೆಂಗಿನ ಕಾಯಿಯ ಮೇಲೆ ಇಟ್ಟಿದ್ದ ಲಕ್ಷ್ಮಿಪದಕವನ್ನು ಹೊಂದಿದ್ದ ಚಿನ್ನದ ಸರ ಕಳವು ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News