ಜ.6ರಿಂದ ಉಡುಪಿ ಜಿಲ್ಲೆಯಲ್ಲಿ ಗಣಿ ಸಚಿವರ ಪರಿಷ್ಕೃತ ಪ್ರವಾಸ

Update: 2021-01-05 14:51 GMT

ಉಡುಪಿ, ಜ.5: ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಜ.6 ಮತ್ತು 7ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಇವರ ಪರಿಷ್ಕೃತ ಪ್ರವಾಸದ ವಿವರ ಹೀಗಿದೆ.

ಜ.6ರ ಬುಧವಾರ ಬೆಳಗ್ಗೆ 11:30ಕ್ಕೆ ಕಾರ್ಕಳದ ಮಂಜುನಾಥ ಪೈ ಹಾಲ್‌ನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾದ ಸಮಾವೇಶದಲ್ಲಿ ಭಾಗವಹಿ ಸಲಿದ್ದು, ಬಳಿಕ ಅಪರಾಹ್ನ 12:15ಕ್ಕೆ ಕಾರ್ಕಳದಲ್ಲಿ ಗಣಿ ಚಟುವಟಿಕೆ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲಿಸುವರು. 1:15ಕ್ಕೆ ಕಾರ್ಕಳ ತಾಪಂ ಸಭಾಂಗಣದಲ್ಲಿ ಗಣಿ ಚಟುವಟಿಕೆಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಂಗಳೂರಿಗೆ ತೆರಳುವರು.

ಜ.7ರಂದು ಅಪರಾಹ್ನ 2:30ರಿಂದ 4:30ರವರೆಗೆ ಉಡುಪಿಯಲ್ಲಿ ಗಣಿ ಚಟುವಟಿಕೆ ಪ್ರದೇಶಗಳಿಗೆ ಹಾಗೂ ಸಿಆರ್‌ಝೆಡ್ ಪ್ರದೇಶದಲ್ಲಿ ನಡೆಯು ತ್ತಿರುವ ಮರಳುಗಾರಿಕೆ ಪ್ರದೇಶಕ್ಕೆ ಭೇಟಿ ಹಾಗೂ ಪರಿಶೀಲನೆ ನಡೆಸುವರು. ಸಂಜೆ 5:30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News