ಬುಡೋಳಿ ವಿಸ್ಡಂ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಸಮಿತಿ ಅಧ್ಯಕ್ಷರಾಗಿ ಡಾ. ಉಮ್ಮರ್ ಬೀಜದಕಟ್ಟೆ ಆಯ್ಕೆ

Update: 2021-06-30 14:06 GMT

ಬಂಟ್ವಾಳ, ಜೂ‌.30: ತಾಲೂಕಿನ ಬುಡೋಳಿಯಲ್ಲಿರುವ ವಿಸ್ಡಂ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಸಮಾಜ ಸೇವಕರೂ, ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದ ಯುವ ಸಾಧಕರೂ ಆಗಿರುವ ಡಾ. ಉಮ್ಮರ್ ಬೀಜದಕಟ್ಟೆ ಅವರು ಆಯ್ಕೆಯಾಗಿದ್ದಾರೆ.  

ಖ್ಯಾತ ವೈದ್ಯ ಡಾ. ತಾಜುದ್ದೀನ್ ಕೆ. ಅವರು ಆಡಳಿತ ನಿರ್ದೇಶಕರಾಗಿಯೂ, ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಅವರು ಶೈಕ್ಷಣಿಕ ನಿರ್ದೇಶಕರಾಗಿಯೂ, ಖ್ಯಾತ ಮೈಂಡ್ ಟ್ರೈನರ್ ಆಗಿರುವ ಡಾ‌. ಸರ್ಫಾಝ್ ಹಾಶಿಮ್ ಅವರು ತರಬೇತಿ ಮತ್ತು ವಿಕಸನ ವಿಭಾಗದ ನಿರ್ದೇಶಕರಾಗಿಯೂ ಆಯ್ಕೆ ಆಗಿರುತ್ತಾರೆ.

ಅಬ್ದುಲ್ ಅಶ್ರಫ್ ಬಿ. ಅವರು ಶಾಲಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News