ಮಂಗಳೂರಲ್ಲಿ ಸಿಎ ದಿನಾಚರಣೆ

Update: 2021-07-01 17:21 GMT

ಮಂಗಳೂರು, ಜು.1: ಚಾರ್ಟರ್ಡ್ ಅಕೌಂಟೆಂಟ್ಸ್ (ಸಿಎ) ದಿನವನ್ನು ಐಸಿಎಐನ ಎಸ್‌ಐಆರ್‌ಸಿಯ ಮಂಗಳೂರು ಶಾಖೆಯಲ್ಲಿ ಆಚರಿಸಲಾಯಿತು.

ಈ ಸಮಾರಂಭದ ಮುಖ್ಯ ಅತಿಥಿಯಾಗಿ ಐಸಿಎಐನ ವಾಷಿಂಗ್ಟನ್ ಅಧ್ಯಾಯದ ಅಧ್ಯಕ್ಷ ಸಿಎ ಗೋಕುಲ್ ದಾಸ್ ಪೈ ಭಾಗವಹಿಸಿದ್ದರು. ಐಸಿಎಐನ ಎಸ್‌ಐಆರ್‌ಸಿಯ ಮಂಗಳೂರು ಶಾಖೆ 2020-21ರಲ್ಲಿ ತನ್ನ ಸುವರ್ಣ ಮಹೋತ್ಸವ ವರ್ಷ ಆಚರಿಸುತ್ತಿದೆ.

ಗೋಲ್ಡನ್ ಜುಬಿಲಿ ರಾಷ್ಟ್ರೀಯ ಸಮ್ಮೇಳನದ ‘ಸ್ವರ್ಣ ಪರ್ವ್’ನ ಆಮಂತ್ರಣ ಪತ್ರವನ್ನು ಈ ವೇಳೆ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಐಸಿಎಐ ಮಂಗಳೂರು ಅಧ್ಯಕ್ಷ ಸಿಎ ಕೆ.ಸುಬ್ರಹ್ಮಣ್ಯ ಕಾಮತ್, ಉಪಾಧ್ಯಕ್ಷ ಸಿಎ ಅಬ್ದುರ್ ರೆಹಮಾನ್ ಮುಸ್ಬಾ, ಸಿಎ ಪ್ರಸನ್ನ ಶೆಣೈ, ಸಿಎ ಗೌತಮ್ ನಾಯಕ್, ಸಿಎ ಗೌತಮ್ ಪೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕಿಟ್‌ಗಳನ್ನು ಇಸ್ಕಾನ್‌ನ ಸನಾ ದನ್ ದಾಸ್ ಸ್ವಾಮೀಜಿ ಅಗತ್ಯವಿರುವವರಿಗೆ ವಿತರಿಸಿದರು. ಸಂಘಟನೆಯ ಹಿರಿಯ ಸದಸ್ಯರಾದ ಸಿಎ ಎಸ್‌ಎಸ್ ನಾಯಕ್, ಸಿಎ ಅನಂತಪದ್ಮನಾಭ, ಸಿಎ ಎಂಎನ್ ಪೈ, ಸಿಎ ಚಂದ್ರಕಾಂತ್ ರಾವ್ ಮತ್ತು ಸಿಎ ನಿತಿನ್ ಜೆ. ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News