ಮೂಡುಬಿದಿರೆ: ಯುವ ಗಾಯಕ ನಿಹಾಲ್ ತಾವ್ರೊಗೆ ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ

Update: 2021-07-03 05:52 GMT

ಮೂಡುಬಿದಿರೆ: ಐಡಲ್ ಸೀಸನ್ 12ರ ಖ್ಯಾತಿಯ ಮೂಡುಬಿದಿರೆಯ ಖ್ಯಾತ ಯುವ ಗಾಯಕ ನಿಹಾಲ್ ತಾವ್ರೊ ಸುಮಾರು 8 ತಿಂಗಳ ಬಳಿಕ ಹುಟ್ಟೂರಿಗೆ ಆಗಮಿಸಿದ್ದು, ಅವರನ್ನು ಇಲ್ಲಿನ ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಲಂಗಾರು ಚರ್ಚಿನ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. 

ಇಂಡಿಯನ್ ಐಡಲ್ ರಿಯಾಲಿಟಿ ಶೋದಲ್ಲಿ ಟಾಪ್ ಏಳು ಸ್ಪರ್ಧಿಗಳಲ್ಲಿ ದಕ್ಷಿಣ ಭಾರತ ಹಾಗೂ ರಾಜ್ಯದ ಏಕೈಕ ಪ್ರತಿಭೆಯಾಗಿರುವ ನಿಹಾಲ್‍ ಅವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಈ ಸಂದರ್ಭ ಶುಭ ಹಾರೈಸಲಾಯಿತು.

ಸೌಹಾರ್ದ ಟ್ರಸ್ಟ್ ಅಧ್ಯಕ್ಷ ಅಬುಲ್ ಆಲಾ ಪುತ್ತಿಗೆ, ಕಾರ್ಯದರ್ಶಿ ಮುಹಮ್ಮದ್ ಶರೀಫ್, ಖಜಾಂಚಿ ರಿಝ್ವಾನ್ ಅಹ್ಮದ್, ಸದಸ್ಯರಾದ ಸಿಎಚ್ ಅಬ್ದುಲ್ ಗಫೂರ್, ಮುಹಮ್ಮದ್ ಅರ್ಷದ್, ಮುಹಮ್ಮದ್ ಆರಿಫ್, ಮಕ್ಬುಲ್ ಹುಸೈನ್, ಮುಹಮ್ಮದ್ ಫಾರೂಕ್ ಹಾಗೂ  ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿಹಾಲ್ ತಾವ್ರೊ ಅವರ ತಂದೆ ತಾಯಿ ಹೆರಾಲ್ಡ್ ತಾವ್ರೊ ದಂಪತಿಯನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News