ಅನಾಥವಾಗಿದ್ದ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ 'ಟೀಂ ಬಿ ಹ್ಯೂಮನ್'

Update: 2021-07-05 11:28 GMT

ಮಂಗಳೂರು: ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಮೃತದೇಹ ಅನಾಥವಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸರು ಟೀಂ ಬಿ ಹ್ಯೂಮನ್ ತಂಡಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಟೀಂ ಬಿ ಹ್ಯೂಮನ್ ತಂಡ  ಮೃತರು ಈ ಮೊದಲು ತಮ್ಮ ಸಂಸ್ಥೆಯ ಸೇವೆ ಪಡೆದುಕೊಂಡಿದ್ದ ಕೇರಳ ತಲಶೇರಿಯ ಬಾಲನ್ ಎಂದು ತಿಳಿಸಿತು.

ಬಾಲನ್ ಅವರ ಮೃತ ದೇಹವನ್ನು ಟೀಂ ಬಿ ಹ್ಯೂಮನ್ ಪೋಸ್ಟ್ ಮಾರ್ಟಂಗೆ ಕಳುಹಿಸಿ, ನಂತರ ತಲಶೇರಿಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News