ಕಾರ್ಕಳ; ಥೀಂ ಪಾರ್ಕ್‌ಗೆ ಎರಡು ರೂ. ಕೋಟಿ ಅನುದಾನ: ಸಚಿವ ಅರವಿಂದ ಲಿಂಬಾವಳಿ ಭರವಸೆ

Update: 2021-07-10 17:04 GMT

ಕಾರ್ಕಳ: ಕೋಟಿ ಚೆನ್ನಯ ಥೀಂ ಪಾರ್ಕ್‌ನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಮತ್ತು ಇತರ ವಿವಿಧ ಕಾಮಗಾರಿಗಳ ಪೂರ್ಣತೆಗೆ  ಎರಡು ಕೋಟಿ ರೂ. ಅನುದಾನ ನೀಡುವುದಾಗಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.

ಇಲ್ಲಿನ ಕೋಟಿ ಚೆನ್ನಯ ಥೀಂ ಪಾರ್ಕ್‌ಗೆ ಶನಿವಾರ ಭೇಟಿ ನೀಡಿದ ಅವರು ಮಾತನಾಡಿ ರಾಜ್ಯದಲ್ಲಿ ಕೊರೋನ ವೈರಸ್  ಸೋಂಕಿನ ಹಿನ್ನೆಲೆಯಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನವನ್ನು ಅದಕ್ಕಾಗಿ ಬಳಸಲಾಗುತ್ತಿದೆ. ಈ ಬಾರಿ ಸುಮಾರು  20700 ಮಂದಿಗೆ ಅನುದಾನವನ್ನು ಬಳಸಲಾಗಿದೆ. ಇಲ್ಲದಿದ್ದದರೆ ರಾಜ್ಯದ ವಿವಿಧ ಉತ್ಸವ, ಕಲಾವಿದರ ಮಾಸಾಶನಕ್ಕೆ ಬಳಕೆಯಾಗುತ್ತಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News