ಪಡುಬಿದ್ರಿ: ಎರಡು ಗುಂಪುಗಳ ಮಧ್ಯೆ ಹೊಡೆದಾಟ; ನಾಲ್ವರಿಗೆ ಗಾಯ
Update: 2021-07-14 17:32 GMT
ಪಡುಬಿದ್ರಿ: ಕ್ರಿಕೆಟ್ ಆಟಕ್ಕೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದ್ದು, ಹೊಡೆದಾಟದಲ್ಲಿ ನಾಲ್ವರು ಗಾಯಗೊಂಡ ಘಟನೆ ಫಲಿಮಾರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕ್ರಿಕೆಟ್ ಆಟದ ಪೂರ್ವದ್ವೇಷದೊಂದಿಗೆ ಪಲಿಮಾರಿನ ಬಾರ್ ಒಂದರ ಹೊರಗೆ ಪಾರ್ಟಿ ಮುಗಿಸಿ ಹೊರಬರುತ್ತಿದ್ದ ಗುಂಪೊಂದರ ಮೇಲೆ ಆರೋಪಿಗಳಾದ ಕರ್ನಿರೆಯ ಸಂಪತ್ ಶೆಟ್ಟಿ, ರಂಜಿತ್ ಶೆಟ್ಟಿ, ರಕ್ಷಿತ್ ಅಭಿಜಿತ್, ದಿನೇಶ್, ನಿತೇಶ್, ಕೀರ್ತೇಶ್, ಮೋಹಿತ್ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಗಾಯಾಳು ಸೂರಜ್, ಶರತ್ ಶೆಟ್ಟಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಪತ್ ಶೆಟ್ಟಿ ಹಾಗೂ ರಂಜಿತ್ ಶೆಟ್ಟಿ ಎಂಬವರಿಗೂ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ವಾರಗಳ ಹಿಂದೆ ಕ್ರಿಕೆಟ್ ಆಟಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದ್ದು, ಇದೇ ಉದ್ದೇಶದಿಂದ ಮತ್ತೆ ಹೊಡೆದಾಟ ನಡೆದಿದೆ ಎಂದು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.