ಮುಖ್ಯಮಂತ್ರಿ ಪದಕ ಪುರಸ್ಕೃತ ಅಗ್ನಿಶಾಮಕ ಸಿಬಂದಿಗೆ ಸನ್ಮಾನ

Update: 2021-07-18 12:16 GMT

ಉಡುಪಿ, ಜು.18: ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಸ್ವೀಕರಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ನಾಲ್ವರು ಸಿಬಂದಿಗಳಿಗೆ ಸನ್ಮಾನ ಕಾರ್ಯಕ್ರಮವು ಉಡುಪಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ದಳದ ಕಚೇರಿಯಲ್ಲಿ ಶನಿವಾರ ನಡೆಯಿತು.

ಉಡುಪಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎಚ್.ಎಂ.ವಸಂತ್ ಕುಮಾರ್, ಸಿಬ್ಬಂದಿಗಳಾದ ಆಶ್ವಿನ್ ಸನಿಲ್, ಎಂ ಕೇಶವ್ ಹಾಗೂ ನೂತನ್ ಕುಮಾರ್ ಅವರನ್ನು ಪೇಟಾ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಠಾಣಾಧಿಕಾರಿ ಸತೀಶ್ ವಹಿಸಿದ್ದರು. ಸಿಬಂದಿ ವಿನಾಯಕ್ ಸ್ವಾಗತಿಸಿ ದರು. ಅಲ್ವಿನ್ ಪ್ರಶಾಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News