ಮಂಗಳೂರು : ಮಂಜಣ್ಣ ಖ್ಯಾತಿಯ ದಿನೇಶ್ ಭಂಡಾರ್ಕಾರ್ ನಿಧನ
Update: 2021-07-19 07:26 GMT
ಮಂಗಳೂರು, ಜು.19: ಬಿ. ಗಣಪತಿ ಭಂಡಾರ್ಕಾರ್ ಮತ್ತು ಸನ್ಸ್ ಸಂಸ್ಥೆಯ ಪಾಲುದಾರರಾದ ದಿನೇಶ್ ಭಂಡಾರ್ಕಾರ್ (61) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ದಿನೇಶ್ ಭಂಡಾರ್ಕಾರ್ ಫಳ್ನೀರ್ ನಿವಾಸಿಯಾಗಿದ್ದು, ಇಂದು ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಬಂದರು ವ್ಯಾಪ್ತಿಯಲ್ಲಿ ಮಂಜಣ್ಣ ಎಂದೇ ಅವರು ಹೆಸರುವಾಸಿಯಾಗಿದ್ದು, ತಮ್ಮ ತಂದೆಯ ಪಟಾಕಿ ಮಾರಾಟ ಉದ್ಯಮದಲ್ಲಿ ತಮ್ಮ 17ನೆ ವಯಸ್ಸಿನಿಂದಲೇ ತೊಡಗಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಲಿದ್ದಾರೆ.