ಶಿರಾಡಿ ಘಾಟ್‌ನಲ್ಲಿ ರಾತ್ರಿ ಸಂಚಾರ ನಿಷಿದ್ಧ: ದ.ಕ. ಜಿಲ್ಲಾ ಎಸ್ಪಿ

Update: 2021-07-22 15:37 GMT

ಮಂಗಳೂರು, ಜು. 22: ಶಿರಾಡಿ ಘಾಟಿ-ಸಕಲೇಶಪುರ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ದೋಣಿಗಲ್ ಹೆದ್ದಾರಿ ಕುಸಿದಿದ್ದು, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಶಿರಾಡಿ ಘಾಟ್‌ನಲ್ಲಿ ರಾತ್ರಿ ವೇಳೆ ಎಲ್ಲ ವಾಹನಗಳ ಸಂಚಾರವನ್ನು ನಿಷಿದ್ಧಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

ಚಾರ್ಮಾಡಿ ಮತ್ತು ಸಂಪಾಜೆ ಘಾಟ್‌ಗಳ ಮೂಲಕ ಪ್ರಯಾಣಿಕರ ವಾಹನಗಳು ರಾತ್ರಿ ವೇಳೆ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಹಾಸನ ಜಿಲ್ಲೆ ಅನುಮತಿಸಿದರೆ ಶಿರಾಡಿ ಘಾಟ್ ನಲ್ಲಿ ಪ್ರಯಾಣಿಕರ ವಾಹನಗಳು ಹಗಲು ವೇಳೆಯಲ್ಲಿ ಸಂಚರಿಸಬಹುದು ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News