'ಸಜ್ಜನ' ಕಾರ್ಯಕ್ರಮ ಸಂಯೋಜಕರಾಗಿ ಹರ್ಷಿತ ಆಡೀಲು ನೇಮಕ

Update: 2021-07-23 11:31 GMT

ಮಂಗಳೂರು : ಸಾಹಿತಿಕ, ಸಾಂಸ್ಕೃತಿಕ, ಕ್ರೀಡೆ, ರಸಪ್ರಶ್ನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ "ಕಾರ್ಯಕ್ರಮ ಸಂಯೋಜಕರಾಗಿ" ಹರ್ಷಿತ ಆಡೀಲು ನೇಮಕರಾಗಿರುತ್ತಾರೆ.

ಹರ್ಷಿತಾ ಇವರು ಮೂಲತಃ  ಪುತ್ತೂರು ತಾಲೂಕಿನವರಾಗಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನ ವಿವಿಧ ಸರ್ಕಾರೇತರ  ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿ, ಪ್ರೋಗ್ರಾಮ್ ಆಫೀಸರಾಗಿ, ಪ್ರೋಗ್ರಾಮ್ ಮ್ಯಾನೇಜರಾಗಿ ವಿವಿಧ ರೀತಿಯ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ.

ಇವರು ಮಂಗಳೂರಿನ ಪ್ರತಿಷ್ಠಿತ ರೋಶನಿ ನಿಲಯ ವಿದ್ಯಾಸಂಸ್ಥೆಯಿಂದ "ಸಮಾಜಸೇವೆಯ" ವಿಷಯದಲ್ಲಿ "ಸ್ನಾತಕೋತ್ತರ" ಪದವಿಯನ್ನು ಪಡೆದುಕೊಂಡಿರುತ್ತಾರೆ.

ಹರ್ಷಿತಾರ ನೇಮಕವು ಜುಲೈ 20, 2021 ರಂದು ಜಾರಿಗೆ ಬರುವಂತೆ ಮಾಡಲಾಗಿದೆ ಎಂದು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News