ನದಿಗೆ ಹಾರಿ ಆತ್ಮಹತ್ಯೆ

Update: 2021-08-05 16:14 GMT

ಮಣಿಪಾಲ, ಆ.5: ಆದಿ ಉಡುಪಿ ಬಾಳೆಕಾಯಿ ಮಂಡಿಯಲ್ಲಿ ಲೈನ್‌ಸೇಲ್ ಕೆಲಸ ಮಾಡಿಕೊಂಡಿದ್ದ ರಾಯಚೂರು ಜಿಲ್ಲೆ ರಾಮತ್ನಾಳ ಗ್ರಾಮದ ಕೃಷ್ಣ ರೆಡ್ಡಿ (21) ಆ.2ರಂದು ಮಿನಿ ಟೆಂಪೋದಲ್ಲಿ ಲೈನ್‌ಸೆಲ್‌ಗೆ ಹೋಗಿದ್ದು, ಅದೇ ದಿನ ಸಂಜೆ ಟೆಂಪೊ ಪುತ್ತಿಗೆ ಸೇತುವೆಯಲ್ಲಿ ಕಂಡುಬಂದಿದ್ದು, ಕೃಷ್ಣ ರೆಡ್ಡಿ ನಾಪತ್ತೆಯಾಗಿದ್ದ.

ಆತನಿಗಾಗಿ ಹುಡುಕಾಡಿದಾಗ ಆ.4ರಂದು ಸಂಜೆ ವೇಳೆ ಆತನ ಮೃತದೇಹ ಪೆರಂಪಳ್ಳಿ ಪಾಸ್‌ಕುದ್ರು ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣ ದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಸ್ವರ್ಣ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News