​ಗಾಂಜಾ ಸೇವನೆ: ಏಳು ಆರೋಪಿಗಳ ಬಂಧನ

Update: 2021-08-05 17:04 GMT

ಮಂಗಳೂರು, ಆ.5: ನಗರದ ಕದ್ರಿ ಶಿವಭಾಗ್ ಸಮೀಪದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಕದ್ರಿ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ವಿಷ್ಣು, ವಿಷ್ಣು ಪಿ.ಆರ್, ಬಿಪಿನ್, ಶರೀಫ್, ಅಕ್ಷಯ್, ಸಿಯಾದ್, ಅಭಿನಂದನ್ ಬಂಧಿತರು. ಅವರ ವಶದಿಂದ ಒಟ್ಟು 825 ಗ್ರಾಂ ಗಾಂಜಾ ಹಾಗೂ 7 ಮೊಬೈಲ್ ಫೋನ್‌ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಗಾಂಜಾದ ಬೆಲೆ 15,000 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News