ಯಲ್ಲಮ್ಮ ದೇವಸ್ಥಾನದಲ್ಲಿ ಕಳವು: ದೂರು

Update: 2021-08-06 17:35 GMT

ಮಂಗಳೂರು, ಆ.6: ನೆಕ್ಕಿಲಗುಡ್ಡೆಯಲ್ಲಿರುವ ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.

ದೇವಸ್ಥಾನದ ಬೀಗ ಮುರಿದು ಮೂರ್ತಿಯ ಕುತ್ತಿಗೆಯಲ್ಲಿದ್ದ 15 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಬೆಳ್ಳಿಯ ಆಭರಣ, ಕಾಣಿಕೆ ಡಬ್ಬಿಗಳು ಸೇರಿದಂತೆ ಅಂದಾಜು ಒಟ್ಟು 80,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಆ.6ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಆ.5ರ ರಾತ್ರಿ 11 ಗಂಟೆಯಿಂದ ಆ.6ರ ಬೆಳಗ್ಗೆ 5ರ ಮಧ್ಯೆ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News