ಶೈಖುನಾ ವಾವಾಡ್ ಕುಂಞಿ ಕೋಯ ಮುಸ್ಲಿಯಾರ್ ನಿಧನ

Update: 2021-08-09 09:05 GMT

ಮಂಗಳೂರು, ಆ.9: ಹಿರಿಯ ಸೂಫೀವರ್ಯ, ಸಮಸ್ತ ಮುಷಾವರ ಸದಸ್ಯ, ಹಲವು ಮೊಹಲ್ಲಾಗಳ ಖಾಝಿಯಾಗಿದ್ದ ವಾವಾಡ್ ಕುಂಞಿಕೋಯ ಮುಸ್ಲಿಯಾರ್ (82) ಇಂದು ಬೆಳಗ್ಗೆ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಕೆಲವು ತಿಂಗಳುಗಳಿಂದ ಮನೆಯಲ್ಲೇ ವಿಶ್ರಾಂತಿ ಪಡೆಯತ್ತಿದ್ದ ಅವರು ಇಂದು ಬೆಳಗ್ಗೆ 9 ಗಂಟೆಗೆ ನಿಧನರಾದರು.

ಶಂಸುಲ್ ಉಲಮಾ ಇಕೆ ಅಬೂಬಕರ್ ಮುಸ್ಲಿಯಾರ್, ಕೋಟುಮಲೆ ಉಸ್ತಾದ್, ತಾಝಕೋಡು ಕುಂಞಲವಿ ಉಸ್ತಾದ್, ಅಂಡೋಣ ಅಬ್ದುಲ್ಲ ಮುಸ್ಲಿಯಾರ್, ನಾರಗಶ್ಶೇರಿ ಅಬೂಬಕರ್ ಮುಸ್ಲಿಯಾರ್, ಪಿಎಂಎಸ್‌ಎ ಪೂಕೋಯ ತಂಙಳ್, ಚಾಪನಂಙಾಡಿ ಬಾಪು ಮುಸ್ಲಿಯಾರ್, ಇಕೆ ಉಮರುಲ್ ಖಾದಿರಿ, ಕಣ್ಣಿಯಾಲ ಮೌಲಾ ಅವರ ಶಿಷ್ಯರಾಗಿದ್ದ ವಾವಾಡ್ ಕುಂಞಿಕೋಯ ಮುಸ್ಲಿಯಾರ್ ಸಾವಿರಾರು ಶಿಷ್ಯಂದಿರನ್ನು ನಾಡಿಗೆ ಅರ್ಪಿಸಿದ್ದರು. ಹಲವು ಮೊಹಲ್ಲಾಗಳ ಖಾಝಿಯಾಗಿದ್ದರು.

ಸಂತಾಪ: ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್‌ಬಿ ದಾರಿಮಿ, ಕಾರ್ಯದರ್ಶಿ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಕೋಶಾಧಿಕಾರಿ ಕೆಆರ್ ದಾರಿಮಿ ಸಂತಾಪ ಸೂಚಿಸಿದ್ದಾರೆ.

ಕಲ್ಲಿಕೋಟೆಯ ತಾಮರಶ್ಶೇರಿ ಸಮೀಪದ ಪರ್ಪಂ ಪೊಯಿಲ್ ಮಸೀದಿಯ ಆವರಣ ಕಬರಸ್ತಾನದಲ್ಲಿ ಇಂದು ಸಂಜೆ 5 ಗಂಟೆಗೆ ದಫನ ಕಾರ್ಯ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News