ಡಿ. 23ರಿಂದ ಉಳ್ಳಾಲ ಉರೂಸ್ : ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್

Update: 2021-08-13 13:02 GMT

ಉಳ್ಳಾಲ : ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ  ದರ್ಗಾ ಉರೂಸ್ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಉಳ್ಳಾಲ ದರ್ಗಾ ವಠಾರದಲ್ಲಿ ಶುಕ್ರವಾರ ನಡೆಯಿತು. ಇಂಬಿಚ್ಚಿ ಕೋಯ ತಂಙಳ್ ಧ್ವಜಾರೋಹಣ ನೆರವೇರಿಸಿದರು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರು, ಉಳ್ಳಾಲ ಕೇಂದ್ರ ಜುಮಾ ಮಸೀದಿ ಹಾಗೂ ಸಯ್ಯದ್ ಮದನಿ ಆಡಳಿತ ಸಮಿತಿ ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮವನ್ನು ಡಿ. 23 ಜ.16ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಉಳ್ಳಾಲ ದರ್ಗಾ ಉರೂಸ್ 2020ರಲ್ಲಿ ನಡೆಯಬೇಕಿತ್ತು. ಕೊರೋನ ಕಾರಣ ದಿಂದ ನಡೆಸಲು ಆಗಲಿಲ್ಲ ಮತ್ತೆ ಮೂರನೇ ಅಲೆ ಆರಂಭಗೊಂಡಿದ್ದು, ಇದರಿಂದ ಮುಂದೂಡಲಾಯಿತು. ಈ ಕಾರಣದಿಂದ 21ನೇ ಪಂಚ ವಾರ್ಷಿಕ ಉರೂಸ್ ಸಮಾರಂಭವನ್ನು  ಡಿ. 23 ರಿಂದ 2022 ಜ.16 ವರೆಗೆ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫಾ ಅಬ್ದುಲ್ಲಾ, ಯು.ಕೆ.ಇಬ್ರಾಹಿಂ, ಜತೆ ಕಾರ್ಯದರ್ಶಿ ಎ.ಕೆ.ಮೊಯಿದ್ದೀನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕ್ಕರ್ ಕೋಟೆಪುರ,  ಎಂ.ಎಚ್.ಇಬ್ರಾಹಿಂ, ಕಾರ್ಯದರ್ಶಿ ಅಮೀರ್ ಹಾಜಿ, ಜತೆಕಾರ್ಯದರ್ಶಿ ಅಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ಕೆನರಾ,  ಸದಸ್ಯರಾದ ಇಬ್ರಾಹಿಂ ಉಳ್ಳಾಲಬೈಲ್, ಆಲಿಮೋನು, ಹಮೀದ್ ಕೋಡಿ, ಮೊಯಿದ್ದೀನ್ ಉಳ್ಳಾಲಬೈಲ್, ಹನೀಫ್ ಸೋಲಾರ್, ಜಮಾಲ್ ಬಾರ್ಲಿ, ಅಬೂಬಕ್ಕರ್ ಅಲೀನಗರ, ಖಾಸಿಂ ಕೋಡಿ, ಹಸನಬ್ಬ ಕೈಕೊ, ಅಬ್ದುಲ್ ಖಾದರ್ ಮುಸ್ಲಿಯಾರ್, ಯೂಸುಫ್ ಸಿದ್ದೀಕ್, ಜಬ್ಬಾರ್ ಮೇಲಂಗಡಿ, ಕೆ.ಮುಹಮ್ಮದ್ ಕಲ್ಲಾಪು, ಹಾಶಿರ್ ಮದನಿ‌ನಗರ, ಅಬ್ದುಲ್ ರಹ್ಮಾನ್ ದಾರಂದಬಾಗಿಲು, ಲತೀಫ್, ಅದ್ದ, ಮೊಯ್ದೀನ್ ಬಿ, ಯು.ಕೆ ಹನೀಫ್ ಮಾರ್ಗತಲೆ, ಮೊಯ್ದೀನ್ ಹಸನ್ ಪೇಟೆ, ಕಲೀಲ್ ಕಿಲಿರಿಯ, ಮಯ್ಯದ್ದಿ ಕೋಡಿ, ಹಸೈನಾರ್ ಬೊಟ್ಟು, ಯು.ಪಿ ಹಮೀದ್, ಇಬ್ರಾಹೀಮ್ ಬಾವ, ಮೊಯ್ದಿನಬ್ಬ ಆಝಾದ್ ನಗರ, ಕೆ.ಪಿ ನಝೀರ್,   ಉಳ್ಳಾಲ ಸಹಾಯಕ ಖಾಝಿ ರವೂಫ್ ಮುಸ್ಲಿಯಾರ್, ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬ್  ಅನ್ವರ್ ಅಲಿ ದಾರಿಮಿ, ತೋಡಾರ್ ಉಸ್ಮಾನ್ ಫೈಝಿ, ಇಬ್ರಾಹಿಂ ಅಹ್ಸನಿ, ಇಬ್ರಾಹಿಂ ಮದನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News