ಸದ್ಭಾವನಾ ವೇದಿಕೆ ಜೆಪ್ಪು ವರ್ತುಲ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-15 09:15 GMT

ಮಂಗಳೂರು : ಸದ್ಭಾವನಾ ವೇದಿಕೆ ಜೆಪ್ಪು ವರ್ತುಲ ವತಿಯಿಂದ ಅತ್ತಾವರ ಕಟ್ಟೆ ಮೈದಾನದಲ್ಲಿ ರವಿವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಲಯನ್ಸ್ ಕ್ಲಬ್ ಝೋನಲ್ ಚೆಯರ್ ಪರ್ಸನ್ ವಿಜಯ ಕುಮಾರ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಸದಸ್ಯರಾದ ಜೆ.ವಿ.ಡಿ ಮೆಲ್ಲೊ ಸ್ವಾತಂತ್ರ್ಯ ಸಂದೇಶ ನೀಡಿದರು.

ಈ ಸಂದರ್ಭ ಜೆಪ್ಪು ಲಯನ್ಸ್ ಕ್ಲಬ್ ಅಧ್ಯಕ್ಷ ರಿಚಾರ್ಡ್ ಡಿಸೋಜ, ಸದಸ್ಯರು ಹಾಗು ಇತರರು ಉಪಸ್ಥಿತರಿದ್ದರು.

ಸದ್ಭಾವನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲಿಹ್ ಮುಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News