​ಪ್ರತ್ಯೇಕ ಪ್ರಕರಣ: ಮೂವರ ನಾಪತ್ತೆ

Update: 2021-08-15 16:02 GMT

ಕಾಪು, ಆ.12: ಮೂಳೂರು ಗುರು ನಾರಾಯಣ ರಸ್ತೆಯಲ್ಲಿರುವ ತಾಯಿ ಮನೆಯಿಂದ ಆ.13ರಂದು ಗಂಡನ ಮನೆಗೆ ಹೋದ ಶಮೀನಾ ಹಾಗೂ ಆಕೆಯ ಮಗ ಶಾನ್ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡ್ಕ : ಪೆರ್ಡೂರು ಪಕ್ಕಾಲು ನಿವಾಸಿ ನಾಗರಾಜ ಅಚಾರ್ಯ (32) ಎಂಬವರು ಆ.11ರಂದು ಬೆಳಗ್ಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News