ಮಂಗಳ ಗ್ರಾಮೀಣ ಯುವಕ ಸಂಘ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-15 17:33 GMT

ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಸಂಘದ ಸಲಹೆಗಾರರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಮಾಜಿ ಮೂಡ ಅಧ್ಯಕ್ಷರು ಧ್ವಜಾರೋಹಣಗೈದರು.

ಮುಖ್ಯ ಅತಿಥಿಗಳಾಗಿ ಕೊಣಾಜೆ ಗ್ರಾಮ  ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ ,  ಸದಸ್ಯರಾದ ಅಚ್ಚುತ  ಗಟ್ಟಿ, ಇಕ್ಬಾಲ್ ಕೊಣಾಜೆ , ರವಿ ಡಿಸೋಜಾ ರುಕಿಯಾ ಕೊಣಾಜೆ , ಮಾಜಿ ಪಂಚಾಯತ್ ಸದಸ್ಯರಾದ ಹಾಜಿ ಹಸನ್ ಕುಂಞಿ ಕೋಡಿಜಾಲ್,  ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಅಮೀರ್ ಕೋಡಿಜಾಲ್, ರಿಫಾಯಿ ಜುಮ್ಮಾ ಮಸ್ಜಿದ್ ಕೊಡಿಜಾಲ್ ಇದರ ಉಪಾಧ್ಯಕ್ಷ ಅಬ್ದುಲ್ ಖಾದರ್ ಅಂದುಚ್ಚ ಕೋಡಿಜಾಲ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಯುವಕ ಸಂಘದ ಮಾಜಿ ಅಧ್ಯಕ್ಷರುಗಳಾದ ಅಬ್ದುನ್ ನಾಸಿರ್ ಕೆಕೆ, ಅಬ್ದುಲ್ ರಹಿಮಾನ್ ಕೋಡಿಜಾಲ್, ಉಪಾಧ್ಯಕ್ಷ ದಯಾನಂದ ಗಟ್ಟಿ ಕೋಶಾಧಿಕಾರಿ ಹಬೀಬ್ ಕೋಡಿಜಾಲ್,  ಸಾಂಸ್ಕೃತಿಕ ಕಾರ್ಯದರ್ಶಿ ಹಮೀದ್ ಕಂಗುಹಿತ್ಲು,  ಶರೀಫ್ ಕೋಡಿಜಾಲ್, ಯುವಕ ಸಂಘದ ಪದಾಧಿಕಾರಿಗಳು ಸದಸ್ಯರು ಊರಿನ ಪ್ರಮುಖರು ಸಮಸ್ತ ನಾಗರಿಕರು ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ,  ಪ್ರೌಢಶಾಲೆಯ ಅಧ್ಯಾಪಕರುಗಳಾದ ರಾಜೀವ್ ನಾಯಕ್, ಜಾನ್ ಡಿಸೋಜಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಾಸಿರ್ ಕೆಕೆ ಸ್ವಾಗತಿಸಿದರು, ಯುವಕ ಸಂಘದ ಅಧ್ಯಕ್ಷರಾದ ಕೆಎಂ ಅಬ್ದುಲ್ ರಹಿಮಾನ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೋಡಿಜಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News