ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ಳಾಲ, ಆ.16: ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಧ್ವಜಾರೋಹಣ ನೆರವೇರಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಮತ್ತು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್ ಸಂದೇಶ ನೀಡಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಪುರುಷೋತ್ತಮ್ ಅಂಚನ್, ಉಪಾಧ್ಯಕ್ಷರಾದ ಸುರೇಶ್ ಭಟ್ನಾಗರ, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಸಾಮಾನಿಗೆ, ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್, ಮಂಗಳೂರು ವಿಧಾನಸಭಾ ಇಂಟಕ್ ಅಧ್ಯಕ್ಷ ಹರೀಶ್ ರಾವ್, ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಪಾವೂರು, ಮಾಜಿ ಸದಸ್ಯರಾದ ಸಿದ್ದೀಕ್ ಕೊಳಂಗರೆ, ಮುನ್ನೂರು ಪಂಚಾಯತ್ ಅಧ್ಯಕ್ಷರಾದ ವಿಲ್ಫ್ರೆಡ್ ಡಿಸೋಜ, ಸದಸ್ಯರಾದ ಹಸೈನಾರ್, ಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಅಝೀಝ್ ಆರ್.ಕೆ.ಸಿ. ಹಾಗೂ ವಿಶಾಲ್ ಕೊಲ್ಯ, ಮನ್ಸೂರ್, ರಾಜು ಬಂಡಸಾಲೆ, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ಇಸ್ಮಾಯೀಲ್, ಸಾಮಾಜಿಕ ಜಾಲತಾಣದ ಸಂಚಾಲಕ ರಾಬಿನ್ ಹಾಗೂ ಚಾಂದಿನಿ, ಕಲಾವತಿ, ಸಮ್ರೀನಾ, ಶಬೀರ್, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್, ವಿಶ್ವನಾಥ್ ತಲಪಾಡಿ, ಲಾವಣ್ಯಾ ತಲಪಾಡಿ, ಚಂದ್ರಹಾಸ್ ಗಟ್ಟಿ ಕೋಟೆಕಾರ್, ರೋಶನ್ ಮಡ್ಯಾರ್, ಪ್ರವೀಣ್ ಕೊಲ್ಯ, ಶೇಖರ್ ಕೋಟೆಕಾರ್, ಹಸನಬ್ಬ ಮಡ್ಯಾರ್, ನಝರ್ ತಲಪಾಡಿ, ಕುಂಞಿ ಬಾವ ಮದಪಾಡಿ, ಶಾಫಿ ಕಲಂದರ್ ಸಾಮಾನಿಗೆ, ನಝೀರ್ ಮದಪಾಡಿ, ಖಾದರ್ ಸಾಮಾನಿಗೆ, ನಾಸಿರ್ ಮದಪಾಡಿ, ರಾಜೇಶ್ ಉಚ್ಚಿಲ, ಲ್ಯಾನ್ಸಿ ಕುತ್ತಾರ್, ಅಶ್ರಫ್ ಮದಪಾಡಿ, ಸುಕುಮಾರ್ ಮಡ್ಯಾರ್ ಮೊದಲಾದವರು ಉಪಸ್ಥಿತರಿದ್ದರು.