ಕಾಪು: ವ್ಯಕ್ತಿ ನಾಪತ್ತೆ
Update: 2021-08-16 15:40 GMT
ಉಡುಪಿ, ಆ.16: ಕಾಪು ತಾಲೂಕಿನ ಕಲ್ಯಾಲು ಇನ್ನಂಜೆ ಗ್ರಾಮದ ಶ್ರೀದೇವಿಕೃಪಾ ಮನೆಯ ನಿವಾಸಿ ಗಣೇಶ ಆಚಾರ್ಯ (50) ಎಂಬವರು ಫೆ.14ರಿಂದ ಕೆಲಸಕ್ಕೆ ಹೋಗಿ ವಾಪಸು ಬಾರದೆ ಕಾಣೆಯಾಗಿದ್ದಾರೆ.
5.8 ಅಡಿ ಎತ್ತರ, ಗೋಧಿ ಮೈಬಣ್ಣ. ಸಪೂರ ಮುಖ ಹೊಂದಿದ್ದು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂ: 0820-2551033, ಮೊ.ನಂ: 9480805449, 9480805466 ಅಥವಾ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಉಡುಪಿ ದೂ.ಸಂ: 0820-252033, ಮೊ.ನಂ: 9480805431ನ್ನು ಸಂಪರ್ಕಿಸುವಂತೆ ಕಾಪು ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.