ವಿಶ್ವಾಸ್ ವೀನಸ್ ಅಪಾರ್ಟ್‌ಮೆಂಟ್‌ನಲ್ಲಿ ಸ್ವಾತಂತ್ರ್ಯೋತ್ಸವ

Update: 2021-08-18 17:07 GMT

ಮಂಗಳೂರು, ಆ.18: ನಗರದ ಜೆಪ್ಪು ಮಹಾಕಾಳಿಪಡ್ಪು ವಿಶ್ವಾಸ್ ವೀನಸ್ ಅಪಾರ್ಟ್‌ಮೆಂಟ್‌ನಲ್ಲಿ ರವಿವಾರ 75ನೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಕಾರ್ಪೊರೇಟರ್ ಭಾನುಮತಿ ಧ್ವಜಾರೋಹಣಗೈದರು. ಬಾಲಕೃಷ್ಣ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ರಫೀಕ್ ಮಾಸ್ಟರ್ ಮುಖ್ಯ ಅತಿಥಿ ಗಳಾಗಿದ್ದರು. ಮುಸ್ತಫಾ ಸಾಹೇಬ್, ಅಡ್ವಕೇಟ್ ಸಿದ್ದೀಕ್, ರವೂಫ್ ಶೇಖ್, ಶಶಿಕಾಂತ್, ಬಬಿತಾ ಡಿಸೋಜ, ಡಿಎನ್ ಗುಜರನ್, ಇಸ್ಮಾಯೀಲ್ ಪಾಲ್ಗೊಂಡಿದ್ದರು.

ಎಸೆಸೆಲ್ಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಯೀದಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News