ಪಿಎಪ್ಐ ಬಜ್ಪೆ ಡಿವಿಷನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: ಪಿಎಪ್ಐ ಬಜ್ಪೆ ಡಿವಿಷನ್ ವತಿಯಿಂದ ಬಜ್ಪೆ ಹಾಗೂ ಬಟ್ರೆಕೆರೆ ಜಂಕ್ಷನ್ ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಬಜ್ಪೆ ರೋಯಲ್ ಹೌಸ್ ಎದುರುಗಡೆ ನಡೆದ ಕಾರ್ಯಕ್ರಮದಲ್ಲಿ ಪಿಎಪ್ಐ ಬಜ್ಪೆ ಡಿವಿಷನ್ ಅಧ್ಯಕ್ಷ ಹಸೈನಾರ್ ಧ್ವಜಾರೋಹಣ ನೆರವೇರಿಸಿ ದರು. ಪಿಎಪ್ಐ ಬಜ್ಪೆ ವಲಯ ಸಮಿತಿ ಸದಸ್ಯ ಇರ್ಷಾದ್ ಸ್ವಾತಂತ್ರ್ಯೋವದ ಸಂದೇಶ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಸಂಶುಲ್ ಉಲಾಮ ಇಸ್ಲಾಮಿಕ್ ಸೆಂಟರ್ ಇದರ ಮಾಜಿ ಅಧ್ಯಕ್ಷ ಹಮ್ಮಬ್ಬ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬಜ್ಪೆ ಅಧ್ಯಕ್ಷ ಶಬೀರ್ ಆಲಿ, ಎಕ್ಕಾರ್ ಗ್ರಾಮ ಪಂಚಾಯತ್ ಸದಸ್ಯ ಅಬೂಬಕ್ಕರ್, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಝೀರ್, ಬಜ್ಪೆ ಡಿವಿಷನ್ ಕಾರ್ಯದರ್ಶಿ ಅನ್ವರ್ ಉಪಸ್ಥಿತರಿದ್ದರು.
ರಾಹಿಲ್ ಸ್ವಾಗತಿಸಿ, ಇಸ್ಮಾಯಿಲ್ ವಂದಿಸಿದರು.
ಬಟ್ರೆಕೆರೆ ಜಂಕ್ಷನ್
ಪಿಎಪ್ಐ ಬಟ್ರೆಕೆರೆ ಜಂಕ್ಷನ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಪ್ಐ ಸುಂಕದಕಟ್ಟೆ ಏರಿಯಾ ಅಧ್ಯಕ್ಷ ಮೊಯ್ದಿನ್ ಖಾನ್ ವಹಿಸಿ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬಟ್ರೆಕೆರೆ ವಲಯ ಅಧ್ಯಕ್ಷ ಇಬ್ರಾಹಿಂ ಸನ್ಲೆ, ಕೋಶಾಧಿಕಾರಿ ಶರೀಫ್ ನಂದಾವರ್, ಜಾಮೀಯ ಮಸೀದಿ ಅಧ್ಯಕ್ಷ ಪಯಾಝ್, ಉಸ್ಮಾನಿಯಾ ಮಸೀದಿ ಇಮಾಮ್ ಸೈಫುಲ್ ಹುದಾ, ಬಟ್ರೆಕೆರೆ ಮಸೀದಿ ಇಮಾಮ್ ನೂರುಲ್ ಅಕ್ಸರ್, ಲಿಯಾಕತ್ ಖಾನ್ , ಎಕ್ಕಾರ್ ಗ್ರಾಮ ಪಂಚಾಯತ್ ಸದಸ್ಯ ಅಬೂಬಕ್ಕರ್ ಉಪಸ್ಥಿತರಿದ್ದರು.
ಪಾಪ್ಯುಲರ್ ಫ್ರಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಇಂಜಿನಿಯರ್ ಸಂದೇಶ ಭಾಷಣ ಮಾಡಿದರು. ಪಿಎಪ್ಐ ಸುಂಕದಕಟ್ಟೆ ಏರಿಯಾ ಕಾರ್ಯದರ್ಶಿ ಸಫ್ವಾನ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.