ಮಂಗಳೂರು: ಸಾಕ್ಷತ್ ಶೆಟ್ಟಿಗೆ ಅಂ.ರಾ. ಪ್ರಶಸ್ತಿ

Update: 2021-08-20 11:59 GMT

ಮಂಗಳೂರು, ಆ.20: ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಅವರು ಕೊಡ ಮಾಡುವ ಸೀಝನ್ 7ನ ಬೆಸ್ಟ್ ಡೈರೆಕ್ಟ್ ಸೆಲ್ಲಿಂಗ್ ಎಂಟರ್ ಪ್ರಿನರ್ ಪ್ರಶಸ್ತಿಯನ್ನು ಸಾಕ್ಷತ್ ಶೆಟ್ಟಿ ಪಡೆದಿದ್ದಾರೆ.

ಮುಂಬೈಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕದ ಮೊದಲ ವ್ಯಕ್ತಿಯಾಗಿದ್ದಾರೆ. ಕಳೆದ 14 ವರ್ಷಗಳಿಂದ ಯುವ ಉದ್ಯಮಿಯಾಗಿರುವ ಇವರು 10 ಸಾವಿರಕ್ಕೂ ಅಧಿಕ ಮಂದಿಗೆ ನೇರ ಮಾರುಕಟ್ಟೆ ಉದ್ಯಮದಲ್ಲಿ ಉದ್ಯೋಗವಕಾಶ ಕಲ್ಪಿಸಿದ್ದಾರೆ.

ಮಂಗಳೂರು ನಿವಾಸಿ ದಿ.ಆನಂದ ಶೆಟ್ಟಿ ಮತ್ತು ಜ್ಞಾನೇಶ್ವರಿ ಶೆಟ್ಟಿ ದಂಪತಿ ಪುತ್ರ. ಇದೇ ವೇದಿಕೆಯಲ್ಲಿ ನಿರೂಪಕ ಶಾಹಿಲ್ ಜಾಹಿರ್ ಅವರು ಕೂಡಾ ಉತ್ತಮ ನಿರೂಪಕ ಪ್ರಶಸ್ತಿ ಪಡೆದಿದ್ದಾರೆ ಎಂದು ಇವರ ಸಹೋದರ ರಕ್ಷಿತ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುವ ಜನತೆ ಉದ್ಯೋಗವಕಾಶದಿಂದ ವಂಚಿತವಾಗುತ್ತಿದೆ. ಹಲವು ಮಂದಿ ಜೀವನದ ಹಾದಿ ತಪ್ಪುತ್ತಿದ್ದಾರೆ. ನೇರ ಮಾರುಕಟ್ಟೆ ಮೂಲಕ ಜೀವನ ರೂಪಿಸಿಕೊಳ್ಳಲು ಅವಕಾಶವಿದೆ ಎಂದು ಪ್ರಶಸ್ತಿ ಪುರಸ್ಕೃತ ಸಾಕ್ಷತ್ ಶೆಟ್ಟಿ ಹೇಳಿದರು.

ಸಾಕ್ಷತ್ ಶೆಟ್ಟಿ ಅವರ ಸಂಬಂಧಿ ಉದಯಕುಮಾರ್ ಶೆಟ್ಟಿ, ಸ್ನೇಹಿತ ಗೋಪಾಲ ಅಂಚನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News