ಪರ್ಕಳ: ಸಿಡಿಲು ಬಡಿದು ತಂದೆ ಮಗನಿಗೆ ಗಾಯ

Update: 2021-08-20 15:55 GMT

ಉಡುಪಿ, ಆ.20: ಪರ್ಕಳದ ಆತ್ರಾಡಿಯ ಪರೀಕ ಅರಮನೆ ದೇವಸ್ಥಾನದ ಬಳಿ ಶುಕ್ರವಾರ ಬೆಳಗ್ಗೆ ಸಿಡಿಲು ಬಡಿದ ಪರಿಣಾಮ ತಂದೆ, ಮಗ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಸಿಡಿಲ ಆಘಾತದಿಂದ ಗಾಯಗೊಂಡ ಪರೀಕ ನಿವಾಸಿ ಸೋಮನಾಥ ಶೆಟ್ಟಿ ಆತ್ರಾಡಿ ಹಾಗೂ ಅವರ ಮಗ ಶಂತನು(19) ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಂದೆ ಚೇತರಿಸಿಕೊಂಡಿದ್ದು ಪುತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ.

ಬೆಂಗಳೂರಿನಲ್ಲಿ ಎಂಜಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಯಾಗಿರುವ ಶಂತನು, ಗುರುವಾರ ಊರಿಗೆ ಬಂದಿದ್ದರು. ಬಿಲ್ಡರ್ ಆಗಿರುವ ಸೋಮನಾಥ ಶೆಟ್ಟಿ ಕುಟುಂಬ ನಾಗರಪಂಚಮಿ ದಿನ ಪೂಜೆ ಮಾಡಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಇಂದು ನಾಗನಿಗೆ ತನು ಹಾಕಲು ಕುಟುಂಬದವರೊಂದಿಗೆ ಗದ್ದೆ ಮಧ್ಯೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸಿಡಿಲು ಬಡಿದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News