​ಆ.30: ಶ್ರೀಕೃಷ್ಣ ವೇಷ ಸ್ಪರ್ಧೆ

Update: 2021-08-20 16:19 GMT

ಮಂಗಳೂರು, ಆ.20: ಕಲ್ಕೂರ ಪ್ರತಿಷ್ಠಾನವು ಕಳೆದ 36 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯು ಆ.30ರಂದು ನಡೆಯಲಿದೆ.

ಕೊರೋನ ನಿಮಿತ್ತ ಈ ವರ್ಷವೂ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ನಿಮ್ಮ ಮನೆಯ ಅಂಗಣವೇ ಕದ್ರಿ ಶ್ರೀ ಮಂಜುನಾಥನ ರಾಜಾಂಗಣ ಎಂಬ ಘೊಷವಾಕ್ಯದೊಂದಿಗೆ ಒಟ್ಟು 36 ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ https://kalkurakrishnavesha.online ಲಿಂಕನ್ನು ಡೌನ್‌ಲೊಡ್ ಮಾಡಿಕೊಂಡು ಕೃಷ್ಣ ವೇಷಧಾರಿ ಮಕ್ಕಳ ಚಟುವಟಿಕೆಯನ್ನು 2 ನಿಮಿಷಗಳ ಕಾಲ ಚಿತ್ರೀಕರಿಸಿ ಆಯಾ ವಿಭಾಗದ ಪ್ರತ್ಯೇಕ ಇಮೇಲ್‌ಗಳಿಗೆ ಮಕ್ಕಳ ಪೂರ್ಣ ವಿವರಗಳೊಂದಿಗೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News