ಜೋಕಟ್ಟೆ: ಕಾರ್ಮಿಕರ ಮೇಲೆ ಹರಿದ ರೈಲು

Update: 2021-08-28 16:14 GMT

ಮಂಗಳೂರು, ಆ.28: ರೈಲು ಹರಿದು ಕಾರ್ಮಿಕರೊಬ್ಬರ ಎರಡೂ ಕಾಲುಗಳು ಕತ್ತರಿಸಲ್ಪಟ್ಟ ಘಟನೆ ಜೋಕಟ್ಟೆಯಲ್ಲಿ ಶನಿವಾರ ನಡೆದಿದೆ.

ಬೈಕಂಪಾಡಿ ತೋಕೂರು ನಿವಾಸಿ ಚೇತನ್‌ ಕುಮಾರ್ (21) ಗಾಯಾಳು ಎಂದು ತಿಳಿದುಬಂದಿದೆ. ಈತ ಮಂಗಳೂರಿನ ಸ್ಟೀಲ್ ಕಂಪೆನಿಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಕಾಲುದಾರಿ ಹಿಡಿದು ತೆರಳುತ್ತಿದ್ದ. ಈ ವೇಳೆ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಕೊಡೆಯನ್ನು ಹಿಡಿದಿದ್ದ. ಈ ವೇಳೆ ರೈಲು ಹಳಿ ದಾಟುವಾಗ ರೈಲು ಬಂದಿರುವುದು ಈತನ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಘಟನೆಯಲ್ಲಿ ಈತನ ಎರಡೂ ಕಾಲುಗಳು ಕತ್ತರಿಸಲ್ಪಟ್ಟಿವೆ. ಹಳ್ಳಿಯ ಪಕ್ಕದಲ್ಲೇ ಬಿದ್ದು ನರಳಾಡುತ್ತಿದ್ದ ಆತನನ್ನು ಸ್ಥಳೀಯರು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News