ಕುಂದಾಪುರ: ‌'ಸಾರಾಸ್' ಡೆಂಟಲ್‌ ಕೇರ್‌ ಆ್ಯಂಡ್ ಇಂಪ್ಲಾಂಟ್‌ ಸೆಂಟರ್ ಶುಭಾರಂಭ

Update: 2021-08-30 15:13 GMT

ಕುಂದಾಪುರ: ಡಾ. ಆಸಿಫ್‌ ಬ್ಯಾರಿ  (BDS, FICOI, USA) ಯವರ ನೂತನ 'ಸಾರಾಸ್' ಡೆಂಟಲ್‌ ಕೇರ್‌ ಆ್ಯಂಡ್  ಇಂಪ್ಲಾಂಟ್‌ ಸೆಂಟರ್ ಸೋಮವಾರ ಶುಭಾರಂಭಗೊಂಡಿತು. ಕುಂದಾಪುರದ ಶಾಸ್ತ್ರಿ ಸರ್ಕಲ್‌ ನಲ್ಲಿರುವ ಶಿವಪ್ರಸಾದ್‌ ಕಟ್ಟಡದಲ್ಲಿ ಈ ಕೇಂದ್ರವನ್ನು ಖ್ಯಾತ ದಂತ ವೈದ್ಯ ಡಾ. ಕೆ. ಸದಾಶಿವ ಶೆಟ್ಟಿ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಕೆ. ಸದಾಶಿವ ಶೆಟ್ಟಿ "ಈ ನೂತನ ಕ್ಲಿನಿಕ್‌ ನಲ್ಲಿನ ಉತ್ತಮ ವಾತಾವರಣ ಹಾಗೂ ಬಳಸಲಾದ ಆಧುನಿಕ ಪುಕರಣಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. "ಈ ಕ್ಷೇತ್ರದಲ್ಲಿ ಡಾ. ಆಸಿಫ್‌ ಬ್ಯಾರಿ ಅವರ ಅಗಾಧ ಅನುಭವ, ಗುಣಾತ್ಮಕ ಶಕ್ತಿ, ಸೇವೆಯ ಕುರಿತಾದ ಧ್ಯೇಯವು ರೋಗಿಗಳಿಗೆ ನಿರೀಕ್ಷೆಗೂ ಮೀರಿದ ಆರೈಕೆ ಸಿಗುವಲ್ಲಿ ಸಹಕಾರಿಯಾಗುತ್ತದೆ. ಅವರ ಹೊಸ ಸಾಹಸವು ಯಶಸ್ವಿಯಾಗಲಿ" ಎಂದು  ಹಾರೈಸಿದರು.

ಬ್ಯಾರೀಸ್‌ ಗ್ರೂಪ್‌ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕ ಹಾಗೂ ಐಜಿಬಿಸಿ ಚೇರ್ ಮ್ಯಾನ್‌ ಸೈಯದ್‌ ಮುಹಮ್ಮದ್‌ ಬ್ಯಾರಿ "ಇಂತಹಾ ಆಧುನಿಕ ಸೌಲಭ್ಯ ಮತ್ತು ಉಪಕರಣಗಳನ್ನೊಳಗೊಂಡ ಸುಸಜ್ಜಿತ ಕ್ಲಿನಿಕ್‌ ಹಾಗೂ ಉತ್ತಮ ಅನುಭವಸ್ಥ ದಂತ ವೈದ್ಯ ಡಾ. ಆಸೀಫ್‌ ರ ಸೇವೆಯು ಕುಂದಾಪುರಕ್ಕೆ ವರದಾನವಾಗಿದೆ.  ಡಾ. ಆಸಿಫ್‌ ಅವರ ಈ ಹೊಸ ಯೋಜನೆ ಬಗ್ಗೆ  ಹೆಮ್ಮೆ ಹಾಗೂ ಸಂತೋಷ ಪಡುತ್ತಿದ್ದೇನೆ. ಅವರ ಅನುಭವ ಮತ್ತು ಕುಶಲತೆಯು ರೋಗಿಗಳಿಗೆ ಆಶಾದಾಯಕವಾಗಲಿ ಹಾಗೂ ಕುಂದಾಪುರದ ನಗುವಿಗೊಂದು ಕಾರಣವಾಗಲಿ" ಎಂದು ಹಾರೈಸಿದರು.

ವೈದ್ಯಕೀಯ ವೃತ್ತಿಪರರು, ಕೈಗಾರಿಕೋದ್ಯಮಿಗಳು ಮತ್ತು ಶಿಕ್ಷಣತಜ್ಞರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಉಪಸ್ಥಿತರಿದ್ದರು. 'ಸಾರಾಸ್‌' ದಂತ ಆರೈಕೆ ಕೇಂದ್ರದ ಸೌಲಭ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News