ಕಾರ್ಕಳ: ಬಡಕುಟುಂಬಕ್ಕೆ ಆರ್ಥಿಕ ನೆರವು

Update: 2021-08-30 17:29 GMT

ಕಾರ್ಕಳ: ಸಾಮಾಜಿಕ ಕಳಕಳಿಯ ಚಿಂತನೆಗಳ ಮೂಲಕ ಮನೆ ಮಾತಾಗಿರುವ 'ನಮ್ಮ ಫ್ರೆಂಡ್ಸ್ ಮುಂಡ್ಕೂರು' ತಂಡದ 24 ನೇ ಹೆಜ್ಜೆಯ ನೆರವಿನ ಕಾರ್ಯಕ್ರಮ ಮುಂಡ್ಕೂರು ಸಪಳಿಗ ಸಮುದಾಯ ಭವನದಲ್ಲಿ ನಡೆಯಿತು.

ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೊಂದಿದ ಮುಂಡ್ಕೂರು ದಡ್ಡುವಿನ ಅಂಗನವಾಡಿ ಶಿಕ್ಷಕಿ ಶಾಲಿನಿಯವರ ಕುಟುಂಬಕ್ಕೆ ಆರ್ಥಿಕ ನೆರವು ಪ್ರದಾನ ಮಾಡಲಾಯಿತು. ನಮ್ಮ ಫ್ರೆಂಡ್ಸ್ ಮುಂಡ್ಕೂರು ತಂಡ ನೀಡಿದ ಧನ ಸಹಾಯದ ಚೆಕ್ಕನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಶಾಲಿನಿಯವರ ಮಕ್ಕಳಿಗೆ ಹಸ್ತಾಂತರಿಸಿದರು.

ತಂಡದ ಅಧ್ಯಕ್ಷ ಪ್ರಕಾಶ್ ನಾಯ್ಕ್, ಸಂಚಾಲಕ ಆನಂದ ಸಾಲ್ಯಾನ್,  ಗೌರವ ಸಲಹೆಗಾರರಾದ ಪ್ರಭಾಕರ ಶೆಟ್ಟಿ, ಶರತ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಉದಯ ಪೂಜಾರಿ, ಕಾರ್ಯದರ್ಶಿ ಅರುಣ್ ರಾವ್, ನವನೀತ್, ರಮೇಶ್ ಪೂಜಾರಿ, ಗುರುತಿಲಕ್‍ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News