ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಅಗತ್ಯ ಇಲ್ಲ: ಶಾಸಕ ರಘುಪತಿ ಭಟ್
Update: 2021-08-31 13:09 GMT
ಉಡುಪಿ, ಆ.31: ಉಡುಪಿ ಜಿಲ್ಲೆಯನ್ನು ಕೂಡ ವೀಕೆಂಡ್ ಕರ್ಪ್ಯೂ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯ ಸರಕಾರ ಸೇರಿಸಿದೆ. ಇದನ್ನು ಸರಕಾರ ರದ್ದುಗೊಳಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯ ಪಾಸಿಟಿವಿಟಿ ದರ ಕೂಡ ಶೇ.1.5ಕ್ಕೆ ಇಳಿದಿದೆ. ಹೀಗಾಗಿ ಇಲ್ಲಿ ವೀಕೆಂಡ್ ಕರ್ಪ್ಯೂ ಅವಶ್ಯಕತೆ ಇಲ್ಲ. ಉಡುಪಿ ಗಡಿ ಜಿಲ್ಲೆ ಆಗಿಲ್ಲದಿರುವುದರಿಂದ ಇಲ್ಲಿ ವೀಕೆಂಡ್ ಕರ್ಪ್ಯೂ ವಿಧಿಸಬಾರದಾಗಿ ಮುಖ್ಯಮಂತ್ರಿ ಮತ್ತು ಸಚಿವ ಸುನಿಲ್ ಕುಮಾರ್ ಅವರಲ್ಲಿ ಆಗ್ರಹಿಸುತ್ತೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.