ಮದರಸದ ಕುರಿತ ಸಿಟಿ ರವಿ ಹೇಳಿಕೆಗೆ ಖಂಡನೆ
Update: 2021-09-01 12:55 GMT
ಉಡುಪಿ, ಸೆ.1: ಭಾರತದ ಮದ್ರಸಗಳಲ್ಲಿ ತಾಲಿಬಾನ್ಗಳನ್ನು ಸೃಷ್ಟಿಸಲಾಗು ತ್ತಿದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು ಹಾಗೂ ಬಾಲಿಶವಾದದ್ದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ ಪಿ ಮೊಯಿದಿನಬ್ಬ ತೀವ್ರವಾಗಿ ಖಂಡಿಸಿದ್ದಾರೆ.
ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ರವಿ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಪರಸ್ಪರ ಅಪನಂಬಿಕೆ ಮತ್ತು ಒಂದು ಸಮುದಾಯವನ್ನು ಅವಮಾನಿಸಿ ಗಲಭೆ ಗೊಂದಲ ಸೃಷ್ಟಿಸಲು ಪ್ರಚೋದನೆ ನೀಡಲು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಪಕ್ಷ ಮುಂದಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.