ಉಡುಪಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

Update: 2021-09-03 15:27 GMT

ಉಡುಪಿ, ಸೆ.3: ಈ ಬಾರಿಯ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 15 ಮಂದಿಯನ್ನು ಆಯ್ಕೆ ಮಾಡಲಾಗಿದೆ. ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.5ರಂದು ಬೆಳಗ್ಗೆ 9:30ಕ್ಕೆ ಸೈಂಟ್ ಸಿಸಿಲಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅದಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರು.

ಕಿರಿಯ ಪ್ರಾಥಮಿಕ ವಿಭಾಗ: 1.ಶಾಂತ ಪೈ, ಸಹಾಯಕ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ, ಯಡ್ತಾಡಿ ಬ್ರಹ್ಮಾವರ ವಲಯ, 2.ಶೇಖರ ಗಾಣಿಗ, ಸ.ಶಿ., ಸ.ಕಿ.ಪ್ರಾ.ಶಾಲೆ ಕಿಸ್ಮತಿ ಬೈಂದೂರು ವಲಯ, 3.ಮಂಜುನಾಥ ಶೆಟ್ಟಿ, ಸ.ಶಿ., ಸ.ಕಿ.ಪ್ರಾ.ಶಾಲೆ ಕುಚ್ಚೂರು ಕಾರ್ಕಳ ವಲಯ, 4.ಸುರೇಶ್ ಶೆಟ್ಟಿ, ಸ.ಶಿ., ಸ.ಕಿ.ಪ್ರಾ.ಶಾಲೆ ಕೊಂಜಾಡಿ ಕುಂದಾಪುರ ವಲಯ, 5.ರೇಷ್ಣಾ ಎಂ.ಎನ್., ಸ.ಶಿ, ಸ.ಕಿ.ಪ್ರಾ.ಶಾಲೆ ಕುದಿ-82 ಉಡುಪಿ ವಲಯ.

ಹಿರಿಯ ಪ್ರಾಥಮಿಕ ವಿಭಾಗ: 1.ದಿನಕರ ಶೆಟ್ಟಿ, ಮುಖ್ಯ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಬಡಾನಿಡಿಯೂರು ಬ್ರಹ್ಮಾವರ ವಲಯ, 2.ಚಂದ್ರನಾರಾಯಣ ಬಿಲ್ಲವ, ಸ.ಶಿ, ಸ.ಹಿ.ಪ್ರಾ. ಶಾಲೆ ಶಿರೂರು, ಬೈಂದೂರು ವಲಯ, 3.ನರೇಂದ್ರ ಕಾಮತ್, ದೈಹಿಕ ಶಿಕ್ಷಕ, ಸ.ಹಿ.ಪ್ರಾ. ಶಾಲೆ ಕಾಬೆಟ್ಟು ಕಾರ್ಕಳ ವಲಯ, 4. ಶೈಲಿ ಪ್ರೇಮ ಕುಮಾರಿ, ಮು.ಶಿ, ಸ.ಹಿ.ಪ್ರಾ. ಶಾಲೆ ಯುಬಿಸಿಎಂ ಸ.ಹಿ.ಪ್ರಾ. ಶಾಲೆ ಪಾದೂರು ಉಡುಪಿ ವಲಯ, 5. ಗಣೇಶ್ ಹೇರ್ಳೆ, ಸ.ಶಿ., ಸ.ಹಿ.ಪ್ರಾ. ಶಾಲೆ ಅಲ್ಬಾಡಿ ಆರ್ಡಿ ಕುಂದಾಪುರ ವಲಯ ಹಾಗೂ ಶ್ರೀನಿವಾಸ, ಮು.ಶಿ, ಸ.ಹಿ.ಪ್ರಾ. ಶಾಲೆ ಶೇಡಿಮನೆ ಕುಂದಾಪುರ ವಲಯ.

ಪ್ರೌಢ ಶಾಲಾ ವಿಭಾಗ: 1.ಪಿ.ವಿ.ಆನಂದ ಸಾಲಿಗ್ರಾಮ, ಎಂಎನ್‌ಡಿಎಸ್‌ಎಂ ಪ್ರೌಢ ಶಾಲೆ ಮುದ್ರಾಡಿ ಕಾರ್ಕಳ ವಲಯ, 2.ಸಂತೋಷ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ, ಸ.ಪ್ರೌ.ಶಾಲೆ ಹೆಸ್ಕತ್ತೂರು ಕುಂದಾಪುರ ವಲಯ, 3.ಸುಬ್ರಹ್ಮಣ್ಯ ತಂತ್ರಿ, ಮು.ಶಿ., ಎಸ್‌ವಿಎಸ್ ಪ್ರೌಢ ಶಾಲೆ ಕಟಪಾಡಿ ಉಡುಪಿ, 4.ಕೃಷ್ಣಮೂರ್ತಿ ಪಿ., ಸ.ಶಿ., ಸ.ಪ.ಪೂ.ಕಾಲೇಜು ನಾವುಂದ ಬೈಂದೂರು ವಲಯ, 5.ಬಿ.ಬಿ.ಪ್ರವೀಣ, ದೈಹಿಕ ಶಿಕ್ಷಕ, ಶ್ರೀನಿಕೇತನ ಅನುದಾನಿತ ಖಾಸಗಿ ಪ್ರೌ.ಶಾ. ಮಟಪಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News