ವೀರಪ್ಪ ಮೊಯ್ಲಿ ನೇಮಕ

Update: 2021-09-04 14:59 GMT

ಮಂಗಳೂರು, ಸೆ.4: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯ ಶಿಫಾರಸ್ಸಿನ ಮೇರೆಗೆ ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುವ ನೂತನ ಸಮಿತಿಯ ಸಂಚಾಲಕರನ್ನಾಗಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪವೊಯ್ಲಿ ನೇಮಕಗೊಳಿಸಲಾಗಿದೆ.

ಈ ಸಮಿತಿಯ ಸದಸ್ಯರನ್ನಾಗಿ ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖುರ್ಶಿದ್, ಮೋಹನ್ ಪ್ರಕಾಶ್, ಆರ್.ಪಿ.ಎನ್ ಸಿಂಗ್, ಪಿ.ಎಲ್. ಪುನಿಯಾ, ಕುಲ್ದೀಪ್ ಬಿಶೋನಿ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News