ಸೌಹಾರ್ದ ಸಂಯುಕ್ತ ಸಹಕಾರಿ ಕಚೇರಿಯಲ್ಲಿ ಕಳವು

Update: 2021-09-04 16:18 GMT

ಉಡುಪಿ, ಸೆ.4: ಉಡುಪಿ ಕೋರ್ಟ್ ರಸ್ತೆಯ ಅನಂತ ಟವರ್ ಕಟ್ಟಡದ ನೆಲಮಹಡಿಯಲ್ಲಿರುವ ಉಡುಪಿ ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಉಡುಪಿ ಜಿಲ್ಲಾ ಸಂಪರ್ಕ ಕಛೇರಿಗೆ ಸೆ.3ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಗದು ಕವು ಮಾಡಿರುವ ಬಗ್ಗೆ ವರದಿಯಾಗಿದೆ.

 ಕಚೇರಿಯ ಶಟರ್‌ಗೆ ಹಾಕಿದ್ದ ಬೀಗಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಕಛೇರಿಯ ಡ್ರಾವರ್‌ನಲ್ಲಿದ್ದ 13,000ರೂ. ನಗದನ್ನು ಕಳವು ಮಾಡಿ ದ್ದಾರೆ ಎಂದು ನಿಗಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಹಿತ್ ಜಿ. ಸಾಲಿಯಾನ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News