ಉಪ್ಪಿನಂಗಡಿ: ‘ಕಾರ್ ಮ್ಯಾಟಿಕ್’ ಶುಭಾರಂಭ

Update: 2021-09-09 17:19 GMT

ಮಂಗಳೂರು, ಸೆ. 9: ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೂಟೇಲು ರಾಯಲ್ ಮೆಕ್ಸಿಕೊ ಹೊಟೇಲ್ ಸಮೀಪದ ಶುಕ್ರಿಯಾ ಸೆಂಟರ್‌ನಲ್ಲಿ ನೂತನ ಕಾರ್ ಮ್ಯಾಟಿಕ್ ಮಳಿಗೆ ಗುರುವಾರ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯ ಖತೀಬ್ ನಝೀರ್ ಅಝ್‌ಹರಿ ದುಆಗೈದು, ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವ್ಯಾಪಾರ-ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಮುಖ್ಯ. ಸಂಸ್ಥೆಯವರು ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವಂತಾಗಲಿ. ಕಾರ್ ಮ್ಯಾಟಿಕ್ ಮಳಿಗೆಯು ಅಭಿವೃದ್ಧಿಸಾಧಿಸಲಿ. ಈ ಸಂಸ್ಥೆಯು ಶೀಘ್ರದಲ್ಲೇ ಆರ್ಥಿಕವಾಗಿ ಸದೃಢಗೊಂಡು ಇನ್ನಷ್ಟು ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಉಪಾಧ್ಯಕ್ಷ ನವೀನ್ ಬ್ರಾಗ್ಸ್, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಸ್ಸೈ ಕುಮಾರ್ ಸಿ. ಕಾಂಬ್ಳೆ, ಜಮಾಅತ್ ಇಸ್ಲಾಂ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಎಸ್‌ಡಿಪಿಐ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸಿದ್ದೀಕ್ ಕೆ.ಎ., ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಉಪ್ಪಿನಂಗಡಿ ದಾರುತೌಹೀದ್ ಮಸೀದಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಮಠ, ನೆಕ್ಕಿಲಾಡಿ ಯು.ಎಫ್.ಜೆ.ಎಂ. ಅಧ್ಯಕ್ಷ ಮುಹಮ್ಮದ್ ಹಾಜಿ ಕೆ., ಉಪ್ಪಿನಂಗಡಿ ಗ್ರಾಪಂ ಸದಸ್ಯ ಯು.ಟಿ. ಮುಹಮ್ಮದ್ ತೌಸಿಫ್, ಪಿಎಫ್‌ಐ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ವರ್ತಕ ಸಂಘದ ಮಾಜಿ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಗ್ರಾಪಂ ಸದಸ್ಯ ಅಬ್ದುಲ್ ರಶೀದ್ ಮಠ, ಉಪ್ಪಿನಂಗಡಿ ಹೊಟೇಲ್ ಸನ್ಮಾತ್ ಮಾಲಕ ಯು.ಪಿ. ಆದಂ, ವರ್ತಕ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ, ಶುಕ್ರಿಯಾ ಟ್ರೇಡರ್ಸ್ ಸಂಸ್ಥೆಯ ಹಾಜಿ ಶುಕೂರ್ ಯು.ಎ., ಉಪ್ಪಿನಂಗಡಿಯ ಅಡಿಕೆ ವರ್ತಕ ಅಬ್ದುಲ್ ರಹಿಮಾನ್ ಹಾಜಿ, ಶುಕ್ರಿಯಾ ಸೆಂಟರ್ ಮಾಲಕ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News