ಮಂಗಳೂರು: ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 6 ಮಂದಿಯ ಬಂಧನ
Update: 2021-11-02 16:28 GMT
ಮಂಗಳೂರು, ನ.2: ನಗರದ ದಕ್ಕೆಯಲ್ಲಿರುವ ಮೊಬೈಲ್ ಮಾರಾಟದ ಅಂಗಡಿ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ 6 ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ಹುಬ್ಬಳಿಯ ಮಣಿಕಂಠ (40), ತಮಿಳುನಾಡಿನ ಮುಹಮ್ಮದ್ ಸದಾಕತುಲ್ಲಾ (39), ಕೇರಳದ ಕೊಲ್ಲಂ ಜಿಲ್ಲೆಯ ಸೈಜು ಎಸ್. (42), ಕನ್ಯಾಕುಮಾರಿಯ ಜಾನು ಬ್ರೈಟ್ (36), ಕಣ್ಣೂರು ಜಿಲ್ಲೆಯ ಪ್ರೇಮರಾಜ್ (47), ತಮಿಳುನಾಡು ರಾಮನಾಥಪುರಂನ ಅಶ್ರಫ್ (25) ಎಂದು ಗುರುತಿಸಲಾಗಿದೆ.
ಪಿಎಸ್ಸೈ ಅನಂತ ಮುರುಡೇಶ್ವರ ಅವರು ಗಸ್ತು ತಿರುಗುತ್ತಿದ್ದಾಗ ಮಂಗಳವಾರ ಮುಂಜಾವ 2:30ರ ಸುಮಾರಿಗೆ ಅನುಮಾನಾಸ್ಪದವಾಗಿ 6 ಮಂದಿ ತಿರುಗಾಡುತ್ತಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಾವುದೇ ಸ್ಪಷ್ಟ ಉತ್ತರ ನೀಡದೇ ಇದ್ದುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.