ನ. 5ರಂದು ಮಿತ್ತಬೈಲ್ ನಲ್ಲಿ 'ಮದೀನಾ ಪಾಷನ್' ಕಾರ್ಯಕ್ರಮ

Update: 2021-11-04 16:13 GMT

ಮಂಗಳೂರು: ಎಸ್.ಕೆ.ಎಸ್.ಎಸ್.ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಡೆಯುವ ಮದೀನಾ ಪಾಷನ್ ಕಾರ್ಯಕ್ರಮ ನ.5ರಂದು ಸಂಜೆ ಮಿತ್ತಬೈಲ್ ನಲ್ಲಿ ನಡೆಯಲಿದೆ. ಅಸರ್ ನಮಾಝ್ ನಂತರ ಮಿತ್ತಬೈಲ್ ಉಸ್ತಾದ್ ಮಕ್ಬರ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ದುಆಶೀರ್ವಚನ ನೀಡಲಿದ್ದಾರೆ.

ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉದ್ಘಾಟನೆಗೈಯಲಿದ್ದು, ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಜಿಫ್ರಿ ತಂಙಳ್ ಬೆಳ್ತಂಗಡಿ, ಉಸ್ಮಾನುಲ್ ಫೈಝಿ ತೋಡಾರು, ರಹ್ಮತುಲ್ಹಾ ಖಾಸಿಮಿ ಮುತ್ತೇಡಂ ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಯ್ಯಿದ್ ಹುಸೈನ್ ತಂಙಳ್ ಕುಕ್ಕಾಜೆ, ಸಯ್ಯಿದ್ ಶರಪುದ್ದೀನ್ ತಂಙಳ್ ಸಾಲ್ಮರ,   ಸಯ್ಯಿದ್ ಹಬೀಬುರಹ್ಮಾನ್ ತಂಙಳ್ ಮುಕ್ವೆ, ಸಯ್ಯಿದ್ ಅನಸ್ ತಂಙಳ್ ಕರುವೇಲು, ಸಯ್ಯಿದ್ ಜಿಫ್ರಿ ತಂಙಳ್ ಆತೂರು, ಸಯ್ಯಿದ್ ಬಾತೀಷ್ ತಂಙಳ್ ಕಿನ್ಶ,  ಸಯ್ಯಿದ್ ಅಕ್ರಂ ಅಲಿ ತಂಙಳ್ ಕರಾವಳಿ, ಅನೀಸ್ ಕೌಸರಿ  ಮೊದಲಾದವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೌಲೀದ್ ಪಾರಾಯಣ, ಅಶ್ರಕ ಬೈತ್ ಆಲಾಪನೆ, ಬುರ್ದಾ ಆಲಾಪನೆ, ಖವ್ವಾಲಿ, ಮದ್ಹುರ್ರಸೂಲ್ ಭಾಷಣ, ನೆಬಿ ಮದ್ಹ್ ಗೀತೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News