ಜೆಡಿಎಸ್‌ನಿಂದ ಪುನೀತ್ ರಾಜಕುಮಾರ್‌ಗೆ ಶ್ರದ್ಧಾಂಜಲಿ ಅರ್ಪಣೆ

Update: 2021-11-08 14:13 GMT

ಉಡುಪಿ, ನ.8: ಜೆಡಿಎಸ್ ಉಡುಪಿ ಜಿಲ್ಲಾ ಕಚೇರಿಯಲ್ಲಿ ರವಿವಾರ ಜರಗಿದ ಜಿಲ್ಲಾ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಪುನೀತ್ ರಾಜಕುಮಾರ್ ಅವರಿಗೆ ಜಿಲ್ಲಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪುನೀತ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಶ್ರದ್ಧಾಂಜಲಿ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ದಕ್ಷಿತ್ ಆರ್.ಶೆಟ್ಟಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಜಯ ಕುಮಾರ್, ಬಾಲಕೃಷ್ಣ ಆಚಾರ್ಯ, ಇಕ್ಬಾಲ್ ಅತ್ರಾಡಿ, ಶ್ರೀಕಾಂತ್ ಹೆಬ್ರಿ, ರಮೇಶ್ ಕುಂದಾಪುರ, ಎಸ್.ಪಿ.ಬರ್ಬೋಜ, ರಾಜು ಆರ್.ಪುತ್ರನ್, ಕೀರ್ತಿರಾಜ್, ಅಬ್ದುಲ್ ಹಮೀದ್ ಯೂಸುಫ್, ಹರಿಣಿ ಆರ್.ಕೋಟ್ಯಾನ್, ದಿಲ್ಶಾದ್, ರಂಗ ಎಕೋಟ್ಯಾನ್, ರಾಮರಾವ್, ಯು.ಎ.ರಶೀದ್, ಸನವರ್ ವಸುಮತಿ, ಅರವಿಂದ ಶೆಟ್ಟಿ, ಉದಯಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News